Asianet Suvarna News Asianet Suvarna News

ಲಖೀಂಪುರ ಖೇರಿಗೆ ಭೇಟಿ ನೀಡಲು ರಾಹುಲ್, ಪ್ರಿಯಾಂಕಾಗೆ ಸಿಕ್ತು ಅನುಮತಿ!

ರೈತರ ಹಿಂಸಾಚಾರದಿಂದಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಉತ್ತರ ಪ್ರದೇಶದ ಲಖೀಂಪುರ್ ಖೇರಿಗೆ ತೆರಳಲು ಕಾಂಗ್ರೆಸ್ ನಾಯಕರಿಗೆ ಯೋಗಿ ಆದಿತ್ಯಾನಾಥ್ ಸರ್ಕಾರ ಕೊನೆಗೂ ಅನುಮತಿ ನೀಡಿದೆ.

ಲಖೀಂಪುರ(ಅ.06): ರೈತರ ಹಿಂಸಾಚಾರದಿಂದಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಉತ್ತರ ಪ್ರದೇಶದ ಲಖೀಂಪುರ್ ಖೇರಿಗೆ(Lakhimpur Kheri) ತೆರಳಲು ಕಾಂಗ್ರೆಸ್(Congress) ನಾಯಕರಿಗೆ ಯೋಗಿ ಆದಿತ್ಯಾನಾಥ್(Yogi Adityanath) ಸರ್ಕಾರ ಕೊನೆಗೂ ಅನುಮತಿ ನೀಡಿದೆ.

ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಮತ್ತು ಇತರೆ ಮೂವರಿಗೆ ಅನುಮತಿ ನೀಡಿರುವುದಾಗಿ ಉತ್ತರ ಪ್ರದೇಶ ಸರ್ಕಾರ ಗೃಹ ಸಚಿವಾಲಯ ಮಾಹಿತಿ ನೀಡಿದೆ. ಇನ್ನು ಅನುಮತಿ ಪಡೆದು ಲಖೀಂಪುರದತ್ತ ಪ್ರಯಾಣ ಆರಂಭಿಸಿದ್ದ ರಾಹುಲ್ ಗಾಂಧಿಯನ್ನು ಲಕ್ನೋ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿತ್ತು. ಈ ವೇಳೆ ಪೊಲೀಸರ ಮೇಲೆ ಕೋಪಗೊಮಡಿದ್ದ ರಾಹುಲ್, ನನ್ನನ್ನು ತಡೆಯಲು ನೀವ್ಯಾರು ಎಂದೂ ಪ್ರಶ್ನಿಸಿದ್ದಾರೆ.

Video Top Stories