Asianet Suvarna News Asianet Suvarna News

ಕೃಷಿ ಕಾನೂನು: ಶರದ್ ಪವಾರ್ ನಿರ್ಧಾರ ಸ್ವಾಗತಿಸಿದ ಕೇಂದ್ರ ಸಚಿವ ತೋಮರ್!

ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನಿನ ವಿರುದ್ಧ 2020ರ ನವೆಂಬರ್ 26ರಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವಿಚಾರವಾಗಿ ಆರಂಭದಿಂದಲೂ ಸರ್ಕಾರದ ವಿರುದ್ಧ ಕಿಡಿ ಕಾರುತ್ತಲೇ ಇದ್ದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಏಕಾಏಕಿ ಮೃದುವಾಗಿದ್ದಾರೆ. ಪವಾರ್‌ರವರ ಈ ನಿರ್ಧಾರವನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸ್ವಾಗತಿಸಿದ್ದಾರೆ. 

ನವದೆಹಲಿ(ಜು.02): ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನಿನ ವಿರುದ್ಧ 2020ರ ನವೆಂಬರ್ 26ರಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವಿಚಾರವಾಗಿ ಆರಂಭದಿಂದಲೂ ಸರ್ಕಾರದ ವಿರುದ್ಧ ಕಿಡಿ ಕಾರುತ್ತಲೇ ಇದ್ದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಏಕಾಏಕಿ ಮೃದುವಾಗಿದ್ದಾರೆ. ಪವಾರ್‌ರವರ ಈ ನಿರ್ಧಾರವನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸ್ವಾಗತಿಸಿದ್ದಾರೆ. ಕೃಷಿ ಕಾನೂನಿನ ಬಗ್ಗೆ ಮಾತನಾಡಿದ್ದ ಪವಾರ್‌, ಇದನ್ನು ರದ್ದುಪಡಿಸುವ ಅಗತ್ಯವಿಲ್ಲ. ತಿದ್ದುಪಡಿ ಮಾಡದರೆ ಸಾಕು ಎಂದಿದ್ದರು. 

ಈ ವಿಚಾರವಾಗಿ ಎಎನ್ಐಗೆ ಪ್ರತಿಕ್ರಿಯಿಸಿರುವ ಸಚಿವ ತೋಮರ್ 'ನಾನು ಅವರ ನಿಲುವನ್ನು ಸ್ವಾಗತಿಸುತ್ತೇನೆ. ಅವರ ನಿರ್ಧಾರವನ್ನು ಕೇಂದ್ರ ಸರ್ಕಾರ ಒಪ್ಪುತ್ತದೆ. ಈ ಬಗ್ಗೆ ನಾವು ಕಿಸಾನ್ ಯೂನಿಯನ್ ಜೊತೆ 11 ಬಾರಿ ಮಾತನಾಡಿದ್ದೇವೆ. ಕೇಂದ್ರ ಸರ್ಕಾರವು ಸಂವಾದದ ಮೂಲಕ ಶೀಘ್ರದಲ್ಲೇ ಪರಿಹಾರವನ್ನು ಕಂಡುಕೊಳ್ಳಲು ಬಯಸಿದೆ, ಇದರಿಂದಾಗಿ ಎಲ್ಲಾ ರೈತರು ಆಂದೋಲನವನ್ನು ಕೊನೆಗೊಳಿಸುತ್ತಾರೆ ಮತ್ತು ಮನೆಗೆ ಹೋಗಿ ಸರಿಯಾಗಿ ಕೃಷಿ ಮಾಡುತ್ತಾರೆ ಎಂದಿದ್ದಾರೆ.
 

Video Top Stories