ಗದಗ: ಹೋಮಕ್ಕೆ ಆಗಮಿಸಿದ ಕಪಿರಾಯ ಪ್ರಸಾದ ಸ್ವೀಕರಿಸಿದ!
ಮಂಗವೊಂದು ಪವಮಾನ ಹೋಮ ಮಾಡೋ ಸಂದರ್ಭದಲ್ಲಿ ಬಂದು ಪವಮಾನನಿಗೆ ನಮಿಸಿ, ಯಾರಿಗೂ ಯಾವುದೇ ತೊಂದರೆ ಕೊಡದೇ ಹೋದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕಳಸಾಪುರ ಗ್ರಾಮದ ಮನೆಯೊಂದರಲ್ಲಿ ಪವಮಾನ ಹೋಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಲ್ಲಿಗೆ ಆಗಮಿಸಿದ ಕಪಿರಾಯ ಹೋಮಕುಂಡಕ್ಕೆ ನಮಿಸಿ ಅಲ್ಲಿದ್ದ ಪ್ರಸಾದವನ್ನಷ್ಟೇ ಸ್ವೀಕರಿಸಿ ತನ್ನ ಪಾಡಿಗೆ ತಾನು ಹೊರಟು ಹೋಗಿದೆ. ಇನ್ನು ಆ ಸ್ಥಳದಲ್ಲಿ ಅಷ್ಟೆಲ್ಲಾ ಹಣ್ಣು ಹಂಪಲುಗಳಿದ್ರೂ ಸಹ ಅದ್ಯಾವುದನ್ನೂ ಮುಟ್ಟದೇ ಬರಿ ಪ್ರಸಾದವನ್ನಷ್ಟೇ ಸ್ವೀಕರಿಸಿದ್ದು ಸ್ಥಳದಲ್ಲಿದ್ದವರಿಗೆ ಆಶ್ಚರ್ಯವನ್ನುಂಟು ಮಾಡಿತು. ಈ ಕೋತಿರಾಯನ ಭಕ್ತಿ ಕಂಡ ಕುಟುಂಬ, ಪೂಜೆ ಸಮಯದಲ್ಲಿ ಸಾಕ್ಷಾತ್ ಹನುಮಂತನೇ ಆಗಮಿಸಿದ್ದಾನೆ ಅಂತ ಭಾವಪರಶರಾಗಿ ಹನುಮಂತನ ಭಕ್ತಿಗೀತೆ ಸಹ ಸಾದರಪಡಿಸಿದ್ದಾರೆ. ಕೋತಿರಾಯನ ಭಕ್ತಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಗವೊಂದು ಪವಮಾನ ಹೋಮ ಮಾಡೋ ಸಂದರ್ಭದಲ್ಲಿ ಬಂದು ಪವಮಾನನಿಗೆ ನಮಿಸಿ, ಯಾರಿಗೂ ಯಾವುದೇ ತೊಂದರೆ ಕೊಡದೇ ಹೋದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕಳಸಾಪುರ ಗ್ರಾಮದ ಮನೆಯೊಂದರಲ್ಲಿ ಪವಮಾನ ಹೋಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಲ್ಲಿಗೆ ಆಗಮಿಸಿದ ಕಪಿರಾಯ ಹೋಮಕುಂಡಕ್ಕೆ ನಮಿಸಿ ಅಲ್ಲಿದ್ದ ಪ್ರಸಾದವನ್ನಷ್ಟೇ ಸ್ವೀಕರಿಸಿ ತನ್ನ ಪಾಡಿಗೆ ತಾನು ಹೊರಟು ಹೋಗಿದೆ. ಇನ್ನು ಆ ಸ್ಥಳದಲ್ಲಿ ಅಷ್ಟೆಲ್ಲಾ ಹಣ್ಣು ಹಂಪಲುಗಳಿದ್ರೂ ಸಹ ಅದ್ಯಾವುದನ್ನೂ ಮುಟ್ಟದೇ ಬರಿ ಪ್ರಸಾದವನ್ನಷ್ಟೇ ಸ್ವೀಕರಿಸಿದ್ದು ಸ್ಥಳದಲ್ಲಿದ್ದವರಿಗೆ ಆಶ್ಚರ್ಯವನ್ನುಂಟು ಮಾಡಿತು. ಈ ಕೋತಿರಾಯನ ಭಕ್ತಿ ಕಂಡ ಕುಟುಂಬ, ಪೂಜೆ ಸಮಯದಲ್ಲಿ ಸಾಕ್ಷಾತ್ ಹನುಮಂತನೇ ಆಗಮಿಸಿದ್ದಾನೆ ಅಂತ ಭಾವಪರಶರಾಗಿ ಹನುಮಂತನ ಭಕ್ತಿಗೀತೆ ಸಹ ಸಾದರಪಡಿಸಿದ್ದಾರೆ. ಕೋತಿರಾಯನ ಭಕ್ತಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.