ಮಿತ್ರ ಕೃಷ್ಣನಿಗಾಗಿ ಅವಲಕ್ಕಿ ತಂದ ಸುಧಾಮ, ಶುದ್ಧವಾದ ಗೆಳೆತನಕ್ಕೆ ಇವರೇ ಸಾಕ್ಷಿ
ಒಮ್ಮೆ ಕೃಷ್ಣನನ್ನು ಭೇಟಿ ಮಾಡಲು ಸುಧಾಮ ದ್ವಾರಕೆಗೆ ಬರುತ್ತಾನೆ. ಮಿತ್ರನನ್ನು ನೋಡಲು ಬರುವಾಗ ಅವಲಕ್ಕಿ ತಂದಿರುತ್ತಾನೆ. ಸುಧಾಮ, ನನಗಾಗಿ ಏನು ತಂದಿದ್ದೀಯಾ.? ಎಂದು ಕೃಷ್ಣ ಕೇಳುತ್ತಾನೆ.
ಒಮ್ಮೆ ಕೃಷ್ಣನನ್ನು ಭೇಟಿ ಮಾಡಲು ಸುಧಾಮ ದ್ವಾರಕೆಗೆ ಬರುತ್ತಾನೆ. ಮಿತ್ರನನ್ನು ನೋಡಲು ಬರುವಾಗ ಅವಲಕ್ಕಿ ತಂದಿರುತ್ತಾನೆ. ಸುಧಾಮ, ನನಗಾಗಿ ಏನು ತಂದಿದ್ದೀಯಾ.? ಎಂದು ಕೃಷ್ಣ ಕೇಳುತ್ತಾನೆ. ಆಗ ವಸ್ತ್ರದ ಗಂಟನ್ನು ಕೃಷ್ಣನಿಗೆ ಕೊಡುತ್ತಾನೆ. ಬಿಚ್ಚಿ ನೋಡಿದಾಗ ಅವಲಕ್ಕಿ ಇರುತ್ತದೆ. ಕೃಷ್ಣ ಒಂದು ಮುಷ್ಟಿ ಅವಲಕ್ಕಿಯನ್ನು ತೆಗೆದುಕೊಳ್ಳುತ್ತಾನೆ. ನಂತರ ಸುಧಾಮನನ್ನು ಬೀಳ್ಕೊಡುತ್ತಾನೆ. ವಾಪಸ್ ಬಂದಾಗ ಗುಡಿಸಲ ಮನೆ ಅರಮನೆಯಾಗಿರುತ್ತದೆ. ಕೃಷ್ಣನ ಅನುಗ್ರಹದಿಂದ ಸುಧಾಮನ ಬಡತನ ದೂರವಾಗುತ್ತದೆ.