Asianet Suvarna News Asianet Suvarna News

'ಕಾಂತಾರ' ಆಸ್ಕರ್ ಅವಾರ್ಡ್‌ಗಾಗಿ ಇಳಕಲ್ ಸೀರೆ ಮೂಲಕ ವಿಶಿಷ್ಟ ಹಾರೈಕೆ

ಕಾಂತಾರ ಸಿನಿಮಾ ಸದ್ಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಸಂಸ್ಕೃತಿಯ ಸೊಗಡಿನ ಅದ್ಭುತ ಚಿತ್ರವನ್ನು ಪ್ರೇಕ್ಷಕಲು ಬಲುವಾಗಿ ಮೆಚ್ಚಿಕೊಂಡಿದ್ದಾರೆ. ಈ ಮಧ್ಯೆ ಬಾಗಲಕೋಟೆಯಲ್ಲೊಬ್ಬ ಯುವಕ 'ಕಾಂತಾರ' ಚಿತ್ರಕ್ಕೆ ಆಸ್ಕರ್ ಅವಾರ್ಡ್‌ ದೊರೆಯಲು ಇಳಕಲ್ ಸೀರೆ ಮೂಲಕ ವಿಶಿಷ್ಟವಾಗಿ ಹಾರೈಸಿದ್ದಾನೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಕಾಂತಾರ ಸಿನಿಮಾ ಸದ್ಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಸಂಸ್ಕೃತಿಯ ಸೊಗಡಿನ ಅದ್ಭುತ ಚಿತ್ರವನ್ನು ಪ್ರೇಕ್ಷಕಲು ಬಲುವಾಗಿ ಮೆಚ್ಚಿಕೊಂಡಿದ್ದಾರೆ. ಈ ಮಧ್ಯೆ ಬಾಗಲಕೋಟೆಯಲ್ಲೊಬ್ಬ ಯುವಕ 'ಕಾಂತಾರ' ಚಿತ್ರಕ್ಕೆ ಆಸ್ಕರ್ ಅವಾರ್ಡ್‌ ದೊರೆಯಲು ಇಳಕಲ್ ಸೀರೆ ಮೂಲಕ ವಿಶಿಷ್ಟವಾಗಿ ಹಾರೈಸಿದ್ದಾನೆ. ಬಾಗಲಕೋಟೆಯ ಇವಾನಿಕರ ಮೇಘರಾಜ್ ಎಂಬವರು ಈ ವಿಶಿಷ್ಟ ಇಳಕಲ್ ಸೀರೆಯನ್ನು ನೇಯ್ದಿದ್ದಾರೆ. ವಿನ್ ಎಟ್ ಆಸ್ಕರ್ ಕಾಂತಾರ ಎಂದು ಸೀರೆಯಲ್ಲಿ ಬರೆಯಲಾಗಿದೆ. ನೇಯ್ದ ಸೀರೆಯನ್ನು ರಿಷಬ್ ಶೆಟ್ಟಿಗೆ ನೀಡಲು ಮೇಘರಾಜ್ ನಿರ್ಧರಿಸಿದ್ದಾರೆ.

ಮೇಘರಾಜ್‌, ಹಲವು ವರ್ಷಗಳಿಂದ ಹೆಸರುವಾಸಿ ಇಳಕಲ್ ಸೀರೆಯಲ್ಲಿ ವಿವಿಧ ರೀತಿಯ ನೇಯ್ಗೆಯನ್ನು ಮಾಡಿಕೊಂಡು ಬಂದಿದ್ದಾರೆ. ಈ ಹಿಂದೆ ರಾಮಮಂದಿರ ಮತ್ತು ಅಪ್ಪು ಅಭಿನಯದ ಜೇಮ್ಸ್‌ ಚಿತ್ರವನ್ನು ಇಳಕಲ್ ಸೀರೆಯಲ್ಲಿ ರೂಪಿಸಿದ್ದರು. ಅದೇ ರೀತಿ ಈಗ ವಿಶಿಷ್ಟವಾಗಿ ಇಳಕಲ್ ಸೀರೆಯಲ್ಲಿ ಕಾಂತಾರ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

kantara ನೋಡಿ ಕಣ್ಣೀರು ಬಂತು; ರಿಷಬ್ ಶೆಟ್ಟಿ ನಟನೆಗೆ ಸುನಿಲ್ ಶೆಟ್ಟಿ ಫಿದಾ