ಪ್ರಜ್ವಲ್ಗೆ ಸಂಕಷ್ಟ: ನಾಮಪತ್ರದಲ್ಲಿ ಸುಳ್ಳು ಮಾಹಿತಿ, DC ವರದಿ ಕೇಳಿದ ಚು.ಆಯೋಗ
ಪ್ರಜ್ವಲ್ ರೇವಣ್ಣ ಪ್ರಮಾಣಪತ್ರ ಪ್ರಕರಣದ ಬಗ್ಗೆ ವರದಿ ಕೊಡಿ ಎಂದು ಹಾಸನ ಡಿಸಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಡೆಡ್ ಲೈನ್ ನೀಡಿದೆ.
ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ಮಾಹಿತಿ ನೀಡಿದ್ದಾರೆ ಅನ್ನೋ ಆರೋಪ ಹಾಸನ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಮಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ವಕೀಲ ದೇವರಾಜ್ ಗೌಡ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ದೂರಿನ ಅನ್ವಯ ಹಾಸನ ಜಿಲ್ಲಾ ಚುನಾವಣಾ ಅಧಿಕಾರಿಯಾಗಿದ್ದ ಡಿಸಿ ಪ್ರೀಯಾಂಕ ಮೇರಿ ಫ್ರಾನ್ಸಿಸ್ಗೆ ಚುನಾವಣಾ ಆಯೋಗ ವರದಿ ನೀಡುವಂತೆ ಡೆಡ್ ಲೈನ್ ನೀಡಿದೆ.