Asianet Suvarna News Asianet Suvarna News

ರಾಜ್ಯದಲ್ಲಿ ‘20% ಸರ್ಕಾರ’ ಆರೋಪ ಸಾಬೀತಾಗಿದೆ: ಸಂಸದ ರಾಜೀವ್ ಚಂದ್ರಶೇಖರ್

ರಾಜ್ಯದ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೋಲಾರ ಸಂಸದ ಕೆ.ಎಚ್. ಮುನಿಯಪ್ಪ ವಿರುದ್ಧ ಕೇಳಿ ಬಂದಿರುವ ಬೇನಾಮಿ ಆಸ್ತಿ ಆರೋಪ ಹಾಗೂ ಸರ್ಕಾರಿ ಅಧಿಕಾರಿ ಬಳಿ ಸಿಕ್ಕ 2 ಕೋಟಿ ರೂ. ಇವೆಲ್ಲವೂ ಕರ್ನಾಟಕದಲ್ಲಿ 20%  ಕಮಿಷನ್ ಸರ್ಕಾರವಿರುವುದಕ್ಕೆ ಸಿಕ್ಕ ಪುರಾವೆಯಾಗಿದೆ, ಎಂದು ಸಂಸದ ರಾಜೀವ್ ಹೇಳಿದ್ದಾರೆ. ಇದೇ ವೇಳೆ, ನೈತಿಕ ಹೊಣೆ ಹೊತ್ತು ಸಚಿವ ಕೃಷ್ಣ ಬೈರೇಗೌಡ ರಾಜೀನಾಮೆ ನೀಡಬೇಕೆಂದು ರಾಜೀವ್ ಚಂದ್ರಶೇಖರ್ ಆಗ್ರಹಿಸಿದ್ದಾರೆ.
 

ರಾಜ್ಯದ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೋಲಾರ ಸಂಸದ ಕೆ.ಎಚ್. ಮುನಿಯಪ್ಪ ವಿರುದ್ಧ ಕೇಳಿ ಬಂದಿರುವ ಬೇನಾಮಿ ಆಸ್ತಿ ಆರೋಪ ಹಾಗೂ ಸರ್ಕಾರಿ ಅಧಿಕಾರಿ ಬಳಿ ಸಿಕ್ಕ 2 ಕೋಟಿ ರೂ. ಇವೆಲ್ಲವೂ ಕರ್ನಾಟಕದಲ್ಲಿ 20%  ಕಮಿಷನ್ ಸರ್ಕಾರವಿರುವುದಕ್ಕೆ ಸಿಕ್ಕ ಪುರಾವೆಯಾಗಿದೆ, ಎಂದು ಸಂಸದ ರಾಜೀವ್ ಹೇಳಿದ್ದಾರೆ. ಇದೇ ವೇಳೆ, ನೈತಿಕ ಹೊಣೆ ಹೊತ್ತು ಸಚಿವ ಕೃಷ್ಣ ಬೈರೇಗೌಡ ರಾಜೀನಾಮೆ ನೀಡಬೇಕೆಂದು ರಾಜೀವ್ ಚಂದ್ರಶೇಖರ್ ಆಗ್ರಹಿಸಿದ್ದಾರೆ.
 

Video Top Stories