Asianet Suvarna News Asianet Suvarna News

ಆಕಾಶವೇನೂ ಬಿದ್ದೋಗಲ್ರಿ, ಎಲ್ಲಾ ಮಕ್ಕಳನ್ನು ಪಾಸ್ ಮಾಡ್ರಿ; ಸಿದ್ದರಾಮಯ್ಯ ಸಲಹೆ

ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ಶಾಲೆ ಆರಂಭ ಬೇಡ ಎಂದು ರಾಜಕೀಯ ನಾಯಕರಾದಿಯಾಗಿ ಸಾರ್ವಜನಿಕ ವಲಯದಲ್ಲಿಯೂ ವಿರೋಧ ವ್ಯಕ್ತವಾಗುತ್ತಿದೆ. 

ಬೆಂಗಳೂರು (ಅ. 09): ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ಶಾಲೆ ಆರಂಭ ಬೇಡ ಎಂದು ರಾಜಕೀಯ ನಾಯಕರಾದಿಯಾಗಿ ಸಾರ್ವಜನಿಕ ವಲಯದಲ್ಲಿಯೂ ವಿರೋಧ ವ್ಯಕ್ತವಾಗುತ್ತಿದೆ. 

ವಠಾರ ಶಾಲೆಯ 4 ಮಕ್ಕಳಿಗ ಸೋಂಕು; ಶಾಲೆ ಪ್ರಾರಂಭಿಸುವ ಮುನ್ನ ಈ ವರದಿ ನೋಡಲೇಬೇಕು

ಮಾಜಿ ಸಿಎಂ ಸಿದ್ದರಾಮಯ್ಯ, ಕೂಡಾ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪೋಷಕರು ಒಪ್ಪಿದರೂ ಶಾಲೆಗಳನ್ನು ತೆರೆಯಬಾರದು. ಶಾಲೆ ತೆರೆದರೆ ನಾನು ವಿರೋಧಿಸುತ್ತೇನೆ. ಮಾಧ್ಯಮಗಳ ಹೋರಾಟಕ್ಕೆ ನನ್ನ ಬೆಂಬಲ ಇದೆ. ಅಗತ್ಯ ಎನಿಸಿದರೆ ಮಕ್ಕಳನ್ನು ಒಂದು ವರ್ಷ ಪಾಸ್ ಮಾಡಿ, ಮುಂದಿನ ತರಗತಿಗೆ ಭಡ್ತಿ ಕೊಡಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.