ಶಾಲೆ ಪುನಾರಂಭಕ್ಕೆ ನಮಗೆ ಆತುರವಿಲ್ಲ, ಸರ್ಕಾರದ ನಿಯಮ ಪಾಲಿಸುತ್ತೇವೆ: ಖಾಸಗಿ ಶಾಲಾ ಒಕ್ಕೂಟ
ರಾಜ್ಯದಲ್ಲಿ ಶಾಲಾ- ಕಾಲೇಜು ಆರಂಭಕ್ಕೆ ಕೇಂದ್ರ ಸರ್ಕಾರ 5.0 ಅನ್ಲಾಕ್ ಮಾರ್ಗಸೂಚಿಯಲ್ಲಿ ಸಮ್ಮತಿ ನೀಡಿದೆ. ಕೋವಿಡ್ ಸಂಕಷ್ಟ ಸಮಯವಾಗಿದ್ದರಿಂದ ಪೋಷಕರು- ವಿದ್ಯಾರ್ಥಿಗಳಿಗೆ ಸಹಜವಾಗಿ ಆತಂಕ ಶುರುವಾಗಿದೆ.
ಬೆಂಗಳೂರು (ಅ. 01): ರಾಜ್ಯದಲ್ಲಿ ಶಾಲಾ- ಕಾಲೇಜು ಆರಂಭಕ್ಕೆ ಕೇಂದ್ರ ಸರ್ಕಾರ 5.0 ಅನ್ಲಾಕ್ ಮಾರ್ಗಸೂಚಿಯಲ್ಲಿ ಸಮ್ಮತಿ ನೀಡಿದೆ. ಕೋವಿಡ್ ಸಂಕಷ್ಟ ಸಮಯವಾಗಿದ್ದರಿಂದ ಪೋಷಕರು- ವಿದ್ಯಾರ್ಥಿಗಳಿಗೆ ಸಹಜವಾಗಿ ಆತಂಕ ಶುರುವಾಗಿದೆ.
ಶಾಲಾ- ಕಾಲೇಜು ಪುನಾರಂಭ ಅ. 10 ನಂತರ ನಿರ್ಧಾರ: ಸುರೇಶ್ ಕುಮಾರ್
ಖಾಸಗಿ ಶಾಲೆಗಳ ಒಕ್ಕೂಟ ಅಧ್ಯಕ್ಷ ಶಶಿಕುಮಾರ್ ಮಾತನಾಡಿ, ಶಾಲೆ ಆರಂಭಿಸಲು ನಾವು ಆತುರ ಮಾಡುತ್ತಿಲ್ಲ. ವಿದ್ಯಾಗಮ ಶಾಲೆಗಳನ್ನು ಸರ್ಕಾರ ಶುರು ಮಾಡಿದೆ. ಇದರ ಬಗ್ಗೆ ನಮ್ಮ ಆಕ್ಷೇಪವಿದೆ. ಹಾಗಾದರೆ ಈ ಮಕ್ಕಳಿಗೆ ಕೋವಿಡ್ ಬರುವುದಿಲ್ವಾ? ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಸರ್ಕಾರದ ನಿಯಮ ಪಾಲಿಸಲು ನಾವು ಸಿದ್ಧರಿದ್ದೇವೆ. ಶಾಲೆ ಪ್ರಾರಂಭಿಸಲು ನಮಗೆ ಆತುರವಿಲ್ಲ' ಎಂದು ಹೇಳಿದ್ದಾರೆ.