ಶಾಲೆ ತೆರೆಯುವುದನ್ನು ಮುಂದೂಡುವುದು ಒಳಿತು; ಸರ್ಕಾರಕ್ಕೆ ಮಂತ್ರಾಲಯ ಶ್ರೀಗಳ ಸಲಹೆ
ಕೊರೊನಾ ಆತಂಕದ ನಡುವೆ ಶಾಲೆಯನ್ನು ತೆರೆಯುವುದು ಸೂಕ್ತವಲ್ಲ. ಕೆಲ ದಿನ ಸರ್ಕಾರ ಶಾಲೆ ತೆರೆಯುವುದನ್ನು ಮುಂದೂಡುವುದು ಒಳಿತು' ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸಲಹೆ ನೀಡಿದ್ದಾರೆ.
ಬೆಂಗಳೂರು (ನ. 06): ಕೊರೊನಾ ಆತಂಕದ ನಡುವೆ ಶಾಲೆಯನ್ನು ತೆರೆಯುವುದು ಸೂಕ್ತವಲ್ಲ. ಕೆಲ ದಿನ ಸರ್ಕಾರ ಶಾಲೆ ತೆರೆಯುವುದನ್ನು ಮುಂದೂಡುವುದು ಒಳಿತು' ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸಲಹೆ ನೀಡಿದ್ದಾರೆ.
ಶಾಲೆ ಆರಂಭಿಸಲು ಇದು ಸಮಯವಲ್ಲ. ಶಾಲೆ ಆರಂಭಿಸಿದ್ರೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಸುಲಭವಲ್ಲ. ಅಂತರ ಕಾಯ್ದುಕೊಳ್ಳುವುದು ಸುಲಭವಲ್ಲ. ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಬಹುದು' ಎಂದಿದ್ದಾರೆ.