ಆನ್ಲೈನ್ ಕ್ಲಾಸ್ ಬಗ್ಗೆ ಇನ್ನೂ ನಿರ್ಧರಿಸಿಲ್ಲ, ಗೊಂದಲ ಬೇಡ: ಸುರೇಶ್ ಕುಮಾರ್
ಶಾಲೆಯನ್ನು ಪುನಾರಂಭಿಸುವ ಬಗ್ಗೆ ತಜ್ಞರ ಶಿಫಾರಸ್ಸಿದೆ ನಿಜ. ಆದರೆ ರಾಜ್ಯದಲ್ಲಿ ಸದ್ಯಕ್ಕೆ ಸ್ಕೂಲ್ ಓಪನ್ ಆಗಲ್ಲ.! ಶಾಲೆ ಆರಂಭ ಮಾಡುವ ಬಗ್ಗೆ ಸರ್ಕಾರ ನಿರ್ಧರಿಸಿಲ್ಲ. ಟ್ವಿಟರ್ನಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಆನ್ಲೈನ್ ಶಿಕ್ಷಣದ ಬಗ್ಗೆಯೂ ನಿರ್ಧಾರವನ್ನು ಘೋಷಿಸಿಲ್ಲ. ತಜ್ಞರ ಸಮಿತಿ ವರದಿ ಸರ್ಕಾರದ ನಿರ್ಧಾರ ಅಲ್ಲ. ಆನ್ಲೈನ್ ಶಿಕ್ಷಣದ ಬಗ್ಗೆ ಹೈಕೋರ್ಟ್ ತೀರ್ಪು ಬಾಕಿ ಇದೆ. ಅನಗತ್ಯವಾಗಿ ಗೊಂದಲ ಬೇಡ. ಮುಂದಿನ ನಿರ್ಧಾರವನ್ನು ಸದ್ಯದಲ್ಲೇ ತಿಳಿಸುತ್ತೇವೆ' ಎಂದು ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ಜು. 08): ಶಾಲೆಯನ್ನು ಪುನಾರಂಭಿಸುವ ಬಗ್ಗೆ ತಜ್ಞರ ಶಿಫಾರಸ್ಸಿದೆ ನಿಜ. ಆದರೆ ರಾಜ್ಯದಲ್ಲಿ ಸದ್ಯಕ್ಕೆ ಸ್ಕೂಲ್ ಓಪನ್ ಆಗಲ್ಲ.! ಶಾಲೆ ಆರಂಭ ಮಾಡುವ ಬಗ್ಗೆ ಸರ್ಕಾರ ನಿರ್ಧರಿಸಿಲ್ಲ. ಟ್ವಿಟರ್ನಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಆನ್ಲೈನ್ ಶಿಕ್ಷಣದ ಬಗ್ಗೆಯೂ ನಿರ್ಧಾರವನ್ನು ಘೋಷಿಸಿಲ್ಲ. ತಜ್ಞರ ಸಮಿತಿ ವರದಿ ಸರ್ಕಾರದ ನಿರ್ಧಾರ ಅಲ್ಲ. ಆನ್ಲೈನ್ ಶಿಕ್ಷಣದ ಬಗ್ಗೆ ಹೈಕೋರ್ಟ್ ತೀರ್ಪು ಬಾಕಿ ಇದೆ. ಅನಗತ್ಯವಾಗಿ ಗೊಂದಲ ಬೇಡ. ಮುಂದಿನ ನಿರ್ಧಾರವನ್ನು ಸದ್ಯದಲ್ಲೇ ತಿಳಿಸುತ್ತೇವೆ' ಎಂದು ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.