Asianet Suvarna News Asianet Suvarna News

ಜೀವಭಯದಿಂದ ಊರು ಬಿಟ್ಟಿದೆ 10 ದಲಿತ ಕುಟುಂಬಗಳು; ಹಿಂದಿದೆ ಈ ಗ್ಯಾಂಗ್..!

ಬೆಂಗಳೂರಿನಿಂದ ಬರೀ 30 ಕಿಮೀ ದೂರದಲ್ಲಿರುವ ಕೊಡತಿ ಎನ್ನುವ ಗ್ರಾಮದಲ್ಲಿ 10 ದಲಿತ ಕುಟುಂಬದ ರೈತರಿಗೆ ಅಜ್ಞಾತವಾಸ ಶುರುವಾಗಿದೆ. ಕಳೆದ 1 ತಿಂಗಳಿಂದ ಇವರು ತಮ್ಮ ಮನೆಗಳಿಗೆ ಬೀಗ ಹಾಕಿಕೊಂಡು ಊರು ಬಿಟ್ಟಿದ್ದಾರೆ. 

ಬೆಂಗಳೂರು (ಅ. 17): ಇಲ್ಲಿಂದ ಬರೀ 30 ಕಿಮೀ ದೂರದಲ್ಲಿರುವ ಕೊಡತಿ ಎನ್ನುವ ಗ್ರಾಮದಲ್ಲಿ 10 ದಲಿತ ಕುಟುಂಬದ ರೈತರಿಗೆ ಅಜ್ಞಾತವಾಸ ಶುರುವಾಗಿದೆ. ಕಳೆದ 1 ತಿಂಗಳಿಂದ ಇವರು ತಮ್ಮ ಮನೆಗಳಿಗೆ ಬೀಗ ಹಾಕಿಕೊಂಡು ಊರು ಬಿಟ್ಟಿದ್ದಾರೆ.

ಬಹುತೇಕ ರೈತರನ್ನು ತಲುಪದ ಸಾಲಮನ್ನಾ ಹಣ; ಅಧಿಕಾರಿಗಳ ಜೇಬು ಸೇರಿತು ಕಾಂಚಾಣ

ಈ 10 ಕುಟುಂಬದ ಒಬ್ಬನೇ ವ್ಯಕ್ತಿ ಕಂಡರೂ ಸಾಕು, ಒಂದು ಗ್ಯಾಂಗ್ ಅವರಿಗೆ ಏನು ಬೇಕಾದರೂ ಮಾಡಬಹುದು ಎನ್ನುವ ಭಯದಿಂದ ಹುಟ್ಟಿದ ಊರನ್ನೇ ಬಿಟ್ಟಿದ್ದಾರೆ. ಅರೇ,  ಇದ್ಯಾಕಪ್ಪಾ ಊರು ಬಿಟ್ರು ಅಂತೀರಾ? ಕಾರಣ ಇದೆ. ಇವರ ಬಳಿಯಿರುವ 2 ಎಕರೆ ಜಮೀನಿನ ಮೇಲೆ ಅದೇ ಊರಿನ ಮುಖಂಡನೊಬ್ಬ ಕಣ್ಣು ಇಟ್ಟಿದ್ದಾನೆ. ಅದಕ್ಕಾಗಿಯೇ ಅವರನ್ನು ಕಿಡ್ನಾಪ್ ಕೂಡಾ ಮಾಡಿಸಿದ್ದಾನೆ ಎನ್ನಲಾಗಿದೆ. 

Video Top Stories