Asianet Suvarna News Asianet Suvarna News

Suvarna FIR : ಕಾರು ಅಡ್ಡಹಾಕಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ.. ಆನೇಕಲ್‌ನಲ್ಲಿ ತಲೆ ಎತ್ತಿದ ಭೂ ಮಾಫಿಯಾ!

* ನಡು ರಸ್ತೆಯಲ್ಲೆ ಉದ್ಯಮಿ ಭಯಾನಕ ಕೊಲೆ
* ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿ ಭೀಕರ ಹತ್ಯೆ
* ಘಟನೆಯ ಹಿಂದೆ ಭೂಮಾಫಿಯಾ ಇದೆಯಾ?
* ರಿಯಲ್ ಎಸ್ಟೇಟ್ ಉದ್ಯಮಿಯ ಹತ್ಯೆ ಹಿಂದಿನ ಕಾರಣ ನಿಗೂಢ

ಆನೆಕಲ್(ಜ. 09) ಕೇಂದ್ರ ಸಚಿವರ (Union Minister) ಮನೆ ಮುಂದೆ ಒಂದು ಭಯಾನಕ (Attack) ಅಟ್ಯಾಕ್. ಅಲ್ಲಿ ಸತ್ತವನು ಸಾಮಾನ್ಯ ವ್ಯಕ್ತಿ ಅಲ್ಲ ರಿಯಲ್ ಎಸ್ಟೇಟ್ ಕುಳ. ಕಾರೊಂದನ್ನು ಮೂರು ಬೈಕ್ ಅಡ್ಡ ಹಾಕುತ್ತದೆ. ನೋಡ ನೋಡುತ್ತಿದ್ದಂತೆ ಬೈಕ್ ನಲ್ಲಿ ಇದ್ದವರು ಕಾರಿನ ಗಾಜುಗಳನ್ನು ಪುಡಿ ಪುಡಿ ಮಾಡುತ್ತಾರೆ.

Blackmail: ಸಚಿವ ಎಸ್‌ ಟಿ ಸೋಮಶೇಖರ್ ಪುತ್ರನಿಗೆ ಬ್ಲಾಕ್‌ಮೇಲ್, ಜ್ಯೋತಿಷಿ ಮಗ ಅರೆಸ್ಟ್

ನಡುರಸ್ತೆಯಲ್ಲಿ ಅಡ್ಡಗಟ್ಟಿ, ಮಾರಕಾಸ್ತ್ರಗಳಿಂದ ಕೊಚ್ಚಿ ನೆಲ್ಲೂರು ಮೂಲದ ರಾಜಶೇಖರ್‌(38) ಕೊಲೆ (Murder) ಮಾಡಲಾಗುತ್ತದೆ.  ಮಚ್ಚಿನ ಏಟಿಗೆ ಆತನ ತಲೆಯೇ ಹೋಳಾಗಿತ್ತು.  ಹಾಗಾದರೆ ಈ ಭಯಾನಕ ಅಟ್ಯಾಕ್ ಹಿಂದಿನ ಕತೆ ಏನು? ಆನೆಕಲ್ ನಲ್ಲಿ ಇಂಥದ್ದೊಂದು ಘಟನೆಗೆ ಮೂಲ ಏನು?  ಇದರ ಹಿಂದೆ ಭೂ ಮಾಫಿಯಾದ  ಕರಿನೆರಳು ಇದೆಯಾ?