ಹೆಂಡತಿ ಫೋನ್ಗೆ ಯುವಕನ ಬೆತ್ತಲೆ ಫೋಟೋ, ಕ್ರಿಮಿನಲ್ ಬುದ್ದಿ ತೋರಿಸಿದ ಲಾಯರ್ ಗಂಡ!
ಒಂದೇ ಒಂದು ಮೆಸೇಜ್ ಒಂದು ಹೆಣ ಬೀಳಿಸಿದ ಕಥೆಯಿದು. ಕ್ರಿಮಿನಲ್ ಲಾಯರ್ನ ಕ್ರಿಮಿನಲ್ ಬುದ್ಧಿಗೆ ಅಮಾಯಕನೊಬ್ಬ ಜೀವ ಕಳೆದುಕೊಂಡಿದ್ದಾನೆ.
ಬೆಂಗಳೂರು (ಮೇ. 02): ಒಂದೇ ಒಂದು ಮೆಸೇಜ್ ಒಂದು ಹೆಣ ಬೀಳಿಸಿದ ಕಥೆಯಿದು. ಕ್ರಿಮಿನಲ್ ಲಾಯರ್ನ ಕ್ರಿಮಿನಲ್ ಬುದ್ಧಿಗೆ ಅಮಾಯಕನೊಬ್ಬ ಜೀವ ಕಳೆದುಕೊಂಡಿದ್ದಾನೆ. ರಾಯಭಾಗದ ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದ ವಕೀಲ ವಾಸುದೇವ ಎಂಬಾತ ಪುರಂದರ್ ಎಂಬ ಶಿಕ್ಷಕನನ್ನು ಕೊಲೆ ಮಾಡಿದ್ದಾನೆ. ಪುರಂದರ್ಗೂ ವಾಸುದೇವನ ಪತ್ನಿಯ ತವರು ಮನೆಗೆ ಉತ್ತಮ ಸಂಬಂಧವಿರುತ್ತದೆ. ಪುರಂದರನ ಅರೆಬೆತ್ತಲೆ ಫೋಟೋ ವಾಸುದೇವನ ಪತ್ನಿ ವೀಣಾ ಮೊಬೈಲ್ಗೆ ಬರುತ್ತದೆ. ಇದನ್ನ ಅನುಮಾನಿಸಿದ ವಾಸುದೇವ್, ಪುರಂದರನನ್ನು ಕೊಲೆ ಮಾಡುತ್ತಾನೆ. ಆದರೆ ಇಲ್ಲೇ ಆಗಿದ್ದು ಎಡವಟ್ಟು....