Asianet Suvarna News Asianet Suvarna News

ಮಂಡ್ಯ; ಗಂಡ ಜೈಲಲ್ಲಿ.. ಪತ್ನಿ ಊರಲ್ಲಿ ಗರ್ಭಿಣಿ...ಬಂದವನೇ ಕತ್ತು ಕತ್ತರಿಸಿದ್ದ!

* ಗಂಡ-ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ
* ಜೈಲಿನಿಂದ ಬಂದು ನೋಡಿದಾಗ ಪತ್ನಿ ಗರ್ಭಿಣಿ
* ಬಕೆಟ್ ನಲ್ಲಿ ರಕ್ತವನ್ನು ತುಂಬಿ ಎರಚಿದ್ದ
* ಪತ್ನಿ ಶವವನ್ನು ಮಧ್ಯರಾತ್ರಿ ಜಮೀನಿನಲ್ಲಿ ಹೂತಿದ್ದ

 

ಮಂಡ್ಯ(ಆ. 24)  ಅಪರಾಧ ಜಗತ್ತಿನಲ್ಲಿ ವಿಚಿತ್ರ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.  ಕೆಲವೊಮ್ಮೆ ಕಾರಣವಿಲ್ಲದ ಕಾರಣಕ್ಕೆ ಕೊಲೆ ಆಗಿಬಿಡುತ್ತದೆ.  ಹನ್ನೆರಡು ವರ್ಷದ ಹಿಂದೆ ಕೊಲೆ ಮಾಡಿ ಜೈಲಿಗೆ ಹೋದ ಗಂಡ ಬಿಡುಗಡೆಯಾಗಿ ಮನೆಗೆ ಬಂದಾಗ ಹೆಂಡತಿ ಗರ್ಭಿಣಿ. ಒಂದು ಕೊಲೆ ಮಾಡಿದ್ದವ ಇನ್ನೊಂದು ಕೊಲೆ ಮಾಡಿದ್ದ. ರಕ್ತದ ಕಲೆ..ಪೊಲೀಸ್ ಶ್ವಾನ..ಹೂತಿಟ್ಟ ಬಾಡಿ.

ಮೈಸೂರು ಚಿನ್ನಾಭರಣ ಅಂಗಡಿಗೆ ನುಗ್ಗಿ ಗುಂಡಿನ ದಾಳಿ

ಶಿವರಾಜ್ ಅಲಿಯಾಸ್  ಪಿಛ್ಛಾ... ಮಂಡ್ಯ ಜಿಲ್ಲೆಯ ಅಪರಾಧ ಸ್ಟೋರಿ. ಎರಡು ತಿಂಗಳಿನಿಂದ ಹೆಂಡತಿಯನ್ನು ಕತ್ತರಿಸುತ್ತೇನೆ ಎಂದು ಹೇಳಿಕೊಂಡೆ ಬಂದಿದ್ದ. ಹೆಂಡತಿ ಹೊಟ್ಟೆಯಲ್ಲಿ ಇದ್ದ ಮಗುವನ್ನು ಆಶ್ರಮಕ್ಕೆ ನೀಡುವ ತೀರ್ಮಾನಕ್ಕೆ ಬರಲಾಗಿತ್ತು. ಪತ್ನಿಗೆ ಮಂಡ್ಯದಲ್ಲಿ ಇರಲು ಆಸಕ್ತಿ ಇರಲಿಲ್ಲ.. ಪತ್ನಿ ರಾಣಿ ತಾನು ಮತ್ತೆ ಪ್ರಿಯಕರನ ಜತೆ ಹೋಗುತ್ತೇನೆ ಎಂದು ಬೆದರಿಕೆ ಹಾಕಿದ್ದಳು. ಸಿಟ್ಟಿಗೆದ್ದವ ಪತ್ನಿಯ ಕತ್ತನ್ನೇ ಕತ್ತರಿಸಿ ರಕ್ತವನ್ನು ಬಕೆಟ್ ನಲ್ಲಿ ಹಿಡಿದಿದ್ದ. 

 

Video Top Stories