22 ವರ್ಷದ ನಂತ್ರ ಸೇಡು... ಅಕ್ಕನ ಮಗ ಅಕ್ಬರ್ ಜತೆ ಹೊರಟಳಾ ಯಶೋಧಾಳ ಮಗಳು!
* ನಿಶ್ಚಿತಾರ್ಥವಾದ ಯುವತಿ ನಾಪತ್ತೆ ಪ್ರಕರಣ
* ಮಂಗಳೂರಿನಲ್ಲೊಂದು ವಿಚಿತ್ರ ರಿವೇಂಜ್ ಸ್ಟೋರಿ
* ಇಪ್ಪತ್ತು ವರ್ಷದ ಹಿಂದೆ ನಡೆದಿದ್ದ ಅಂತರ್ ಧರ್ಮೀಯ ವಿವಾಹಕ್ಕೆ ಈಗ ಸೇಡು
* ತವರು ಮನೆಯವರಿಂದಲೇ ಮಗಳ ಮೇಲೆ ಸೇಡು
ಮಂಗಳೂರು(ಸೆ. 10) ನಿಶ್ವಿತಾರ್ಥವಾಗಿದ್ದ ಯುವತಿ ಪರಾರಿ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ. ಇದೊಂದು ವಿಚಿತ್ರ ಲವ್ ಮ್ಯಾರೇಜ್ ರಿವೆಂಜ್ ಕತೆ. ವರ್ಷಗಳ ನಂತರ ತವರು ಮನೆಯಿಂದ ಸೇಡು ತೀರಿಸಿಕೊಳ್ಳಲಾಗಿದೆ ಎಂಬ ಆರೋಪ ಬಂದಿದೆ.
ನಿಶ್ಚಿತಾರ್ಥವಾದ ಹುಡಗಿ ಒಂದು ಲಕ್ಷ ಮೌಲ್ಯದ ಚಿನ್ನ ಮತ್ತು 50 ಸಾವಿರ ಮೌಲ್ಯದ ಆಭರಣ ತೆಗೆದುಕೊಂಡು ಪರಾರಿಯಾಗಿದ್ದಾಳೆ. ಕಳೆದ 20 ವರ್ಷದ ಹಿಂದೆ ನಡೆದಿದ್ದ ಅಂತರ್ ಧರ್ಮೀಯ ವಿವಾಹದ ರಿವೆಂಜ್ ಇಲ್ಲಿ ಕಾಣಿಸುತ್ತಿದೆ. ಮನೆ ಬಿಟ್ಟು ಹೋದ ತಂಗಿ ವಿರುದ್ಧ ಈಗ ಅಕ್ಕನೇ ಸೇಡು ತೀರಿಸಿಕೊಂಡಿದ್ದಾಳೆ ಎನ್ನಲಾಗಿದೆ. ಯಶೋಧಾ ಮಗಳು ರೇಷ್ಮಾ ಯಶೋಧಾ ಅಕ್ಕನ ಮಗ ಅಕ್ಬರ್ ಜತೆ ಪರಾರಿಯಾಗಿದ್ದಾಳೆ ಎನ್ನುವ ಮಾತು ಬಂದಿದೆ.