ಮಕ್ಕಳ ಕಣ್ಣಲ್ಲಿ ತಂದೆಯೇ ವಿಲನ್, ಅನೈತಿಕ ಸಂಬಂಧವೇ ಸಾವಿಗೆ ಕಾರಣವಾಯ್ತಾ.?
ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಹಾಗೂ ಮಗು ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ತಂದೆಯ ವಿರುದ್ಧ ಮಕ್ಕಳು ಬರೆದಿರುವ ಮೂರು ಡೆತ್ನೋಟ್ ಪೊಲೀಸರಿಗೆ ಸಿಕ್ಕಿದೆ.
ಬೆಂಗಳೂರು (ಸೆ. 20): ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಹಾಗೂ ಮಗು ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ತಂದೆಯ ವಿರುದ್ಧ ಮಕ್ಕಳು ಬರೆದಿರುವ ಮೂರು ಡೆತ್ನೋಟ್ ಪೊಲೀಸರಿಗೆ ಸಿಕ್ಕಿದೆ. ತಂದೆ ಶಂಕರ್ ಮಹಿಳೆಯೊಬ್ಬರ ಜತೆ ಅನೈತಿಕ ಸಂಬಂಧ ಹೊಂದಿರುವುದು ಹಾಗೂ ನಮಗೆ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ರದಲ್ಲಿ ಬರೆದಿದ್ದಾರೆ.
1989 ರಲ್ಲಿ ಖಾಲಿ ಕೈಯಲ್ಲಿ ಬಂದಿದ್ದ ಶಂಕರ್ ಇಷ್ಟೊಂದು ಆಸ್ತಿ ಸಂಪಾದಿಸಿದ್ದು ಹೇಗೆ?
ಪುತ್ರ ಮಧುಸಾಗರ್ ಅವರ ಕೊಠಡಿಯಲ್ಲಿ ದೊರೆತ ಡೆತ್ನೋಟ್ನಲ್ಲಿ ತಂದೆ ಶಂಕರ್ ಅವರಿಗೆ ಅಕ್ರಮ ಸಂಬಂಧವಿತ್ತು. ಅದೇ ಕಾರಣಕ್ಕೆ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ನನ್ನ ಲ್ಯಾಪ್ಟಾಪ್ನಲ್ಲಿ ಅದರ ಸಂಪೂರ್ಣ ವಿವರವಿದೆ ಎಂದು ಬರೆದಿದ್ದಾನೆ. ಪೊಲೀಸರು ಆತನ ಕೊಠಡಿಯಲ್ಲಿದ್ದ ಲ್ಯಾಪ್ಟಾಪ್ ಅನ್ನು ವಶಪಡಿಸಿಕೊಂಡಿದ್ದಾರೆ.