Asianet Suvarna News Asianet Suvarna News

ನಿರ್ಜನ ಪ್ರದೇಶದಲ್ಲಿ ಬಿದ್ದಿತ್ತು ರೌಡಿಶೀಟರ್ ಹೆಣ: ಮುದಿರೌಡಿ ಎಂದು ಕೆಣಕಿದ್ದೇ ಕೊಲೆಗೆ ಕಾರಣವಾಯ್ತಾ..?

ಮಾಜಿ ರೌಡಿಶೀಟರ್ ಕೆಣಕಿದ್ದಕ್ಕೆ ಭೀಕರವಾಗಿ ಹತ್ಯೆ
ಎಲ್ಲಾ ಬಿಟ್ಟಿದ್ದವನು ಗಾಂಚಲಿ ಮಾತ್ರ ಬಿಟ್ಟಿರಲಿಲ್ಲ
ಮುದಿರೌಡಿ ಎಂದಿದ್ದೆ ಕೊಲೆಗೆ ಕಾರಣವಾಯ್ತಾ..?
 

ಅದು ಬೆಂಗಳೂರಿನ ತಪ್ಪಲಲ್ಲೇ ಇರೋ ಜಿಲ್ಲೆ ಕಲ್ಪತರು ನಾಡು ತುಮಕೂರು(Tumakuru). ಶರಣರು ನೆಲೆಸಿದ್ದ ಜಾಗ ಇಂದು ಅಕ್ಷರಶಃ ರೌಡಿಸಂ ಜಿಲ್ಲೆ ಆಗ್ತಿದ್ಯಾ ಅನ್ನೋ ಅನುಮಾನ ಮೂಡ್ತಿದೆ. ಅದಕ್ಕೆ ಕಾರಣವಾಗಿದ್ದು ಇತ್ತೀಚೆಗೆ ನಡೆಯುತ್ತಿರುವ ಕ್ರೈಂಗಳೇ ಸಾಕ್ಷಿ. ತುಮಕೂರಿನ ರೌಡಿಶೀಟರ್ ಮಾಡಬಾರದ ಎಲ್ಲಾ ಕೆಲಸ ಮಾಡಿ ಇವತ್ತು ಎಲ್ಲಾ ಬಿಟ್ಟಿದಿನಿ ಅಂತ ಓಡಾಡ್ಕೊಂಡು ಇದ್ದ. ಆದ್ರೆ ಮಾಡಿದ ಪಾಪ ಸುಮ್ನೆ ಬಿಡಬೇಕಲ್ಲ. ಯಾರ್ಯಾರಿಗೆ ಅದೇನು ಅನ್ಯಾಯ ಮಾಡಿದ್ನೋ ಏನೋ ಹೆಂಡತಿಯ ಬಳಿ ಚಪಾತಿ ಮಾಡಿಡು, ಬರ್ತೀನಿ ಅಂತಾ ಹೇಳಿ ಹೋಗಿದ್ದ ಆತ ಭೀಕರ ಕೊಲೆಯಾಗಿದ್ದಾನೆ(Murder). ಮಾರುತಿ ಅಲಿಯಾಸ್ ಪೊಲಾರ್ಡ್(Rowdy sheeter Pollard) ಎಲ್ಲವನ್ನು ಬಿಟ್ಟು ಸುಮ್ಮನಿದ್ದ. ಒಂದೂವರೆ ವರ್ಷದಿಂದ ಈಚೆಗೆ ತಾನು ಪ್ರೀತಿಸಿದ ಹುಡ್ಗಿಯನ್ನ ಮದ್ವೆ ಆಗಿ ತಾನಾಯ್ತು ತನ್ನ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಆಯ್ತು ಅಂತ ಇದ್ದ.ಹೀಗೆ ಇದ್ದಿದ್ರೆ ಈ ರೀತಿ ಬೀದಿ ಹೆಣವಾಗ್ತಿರಲಿಲ್ಲ. ಆದ್ರೆ ಪೋಲಾರ್ಡ್ ಮಾಡಿದ್ದ ತಪ್ಪು ಏನಂದ್ರೆ ಆತನನ್ನು ಕೆಣಕಿದ್ದು, ಆತನನ್ನು ಕೆಣಕಿ ಭೀಕರವಾಗಿ ಹತ್ಯೆಯಾಗಿ ಹೋಗ್ಬಿಟ್ಟ. ಪೊಲಾರ್ಡ್ ನಿಂದ ಆತನ ಗರ್ಭಿಣಿ ಹೆಂಡತಿ ಬದುಕು ಬೀದಿಗೆ ಬಂದಿದ್ದು ಮಾತ್ರ ವಿಷಾದನೀಯ.

ಇದನ್ನೂ ವೀಕ್ಷಿಸಿ:  ಕಡಲ ನಗರಿಯಲ್ಲಿ ಹೆಚ್ಚಾಯ್ತು ಮರಳಿನ ಸಮಸ್ಯೆ: ಕೃತಕ ಅಭಾವಕ್ಕೆ ಗುತ್ತಿಗೆದಾರರು ಕಂಗಾಲು

Video Top Stories