Asianet Suvarna News Asianet Suvarna News

ಪಾದರಾಯನಪುರ: ಮತ್ತೆ ಬಾಲ ಬಿಚ್ಚಿದ ಮಹಿಳೆಯರು, ಈ ಬಾರಿ ಏನಂತೆ?

ಮತ್ತೆ ಪಾದರಾಯನಪುರದಲ್ಲಿ ಹೆಂಗಸರಿಂದ ಗಲಾಟೆ ..!  ಆ ರಸ್ತೆ ಯಾಕೆ ಫ್ರೀ ಮಾಡ್ತೀರಾ.. ನಮ್ಮ ರಸ್ತೆಯನ್ನು ಫ್ರೀ ಮಾಡಿ/ ಕೊರೊನಾ ಇಲ್ಲದ ಕಡೆ ರಸ್ತೆಯನ್ನು ಫ್ರೀ ಮಾಡುವಂತೆ ಸೂಚಿಸಿದ್ದ ಡಾಕ್ಟರ್ ಗಳು/  ಹೀಗಾಗಿ ಕೆಲ ರಸ್ತೆಗಳನ್ನು ಫ್ರೀ ಮಾಡಲು ಹೊರಟಿದ್ದ ಪೊಲೀಸರು

ಬೆಂಗಳೂರು(ಮೇ 29) ಕ್ವಾರಂಟೈನ್ ಗೆ ಬನ್ನಿ ಎಂದು ಕರೆಯಲು ಹೋಗಿದ್ದ ಪೊಲೀಸ್ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ಪಾದರಾಯನಪುರದಲ್ಲಿ ಹಲ್ಲೆಯಾಗಿದ್ದು ದೊಡ್ಡ ಸುದ್ದಿಯಾಗಿತ್ತು.  ಆರೋಪಿಗಳನ್ನು ಬಂಧಿಸಿ ಏರಿಯಾವನ್ನು ಸೀಲ್ ಡೌನ್ ಮಾಡಲಾಗಿತ್ತು.

ಬುದ್ಧಿ ಕಲಿಯದ ಪಾದರಾಯನಪುರ ಜನ; ಹಲ್ಲೆ ಮಾಡಿದವರ ಕತೆ ನೋಡಿ

ಈಗ ಪಾದರಾಯನಪುರದಲ್ಲಿ ಮಹಿಳೆಯರು ಬಾಲ ಬಿಚ್ಚಿದ್ದಾರೆ.  ಪಾದರಾಯನಪುರ 11 ನೇ  ಕ್ರಾಸ್ ನ ಕೆಲ ಅಡ್ಡರಸ್ತೆಗಳನ್ನ ಫ್ರೀ ಮಾಡಲು ತೆರಳಿದ್ದ ಪೊಲೀಸರೊಂದಿಗೆ ಅಲ್ಲಿನ ಮಹಿಳೆಯರು ವಾಗ್ವಾದಕ್ಕೆ ಇಳಿದಿದ್ದಾರೆ.  ಸದ್ಯ ಯಥಾಸ್ಥಿತಿಯೇ ಅಲ್ಲಿದೆ.

ಆ ರಸ್ತೆ ಯಾಕೆ ಫ್ರೀ ಮಾಡ್ತೀರಾ.. ನಮ್ಮ ರಸ್ತೆಯನ್ನು ಫ್ರೀ ಮಾಡಿ  ಎಂದು ಪೊಲೀಸರಿಗೆ ಬೇಡಿಕೆ ಇಟ್ಟಿದ್ದಾರೆ. ಕೊರೋನಾ ಇಲ್ಲದ ಕಡೆ ರಸ್ತೆ ಫ್ರೀ ಮಾಡಿ ಎಂದು ವೈದ್ಯರು ಹೇಳಿದ್ದರು. 


 

Video Top Stories