Asianet Suvarna News Asianet Suvarna News

ವಂಚನೆ ಕೇಸ್‌: ಸೇವಾಲಾಲ್‌ ಸ್ವಾಮಿ ವಿರುದ್ಧ ಮತ್ತೊಂದು FIR

ಯುವರಾಜ್‌ ಅಲಿಯಾಸ್‌ ಸೇವಾಲಾಲ್‌ ಸ್ವಾಮಿ ವಿರುದ್ಧ ದೂರು ದಾಖಲು| ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು| ಮೈಸೂರಿನ ಡಾ. ಗುರುರಾಜ್‌ ರವಿ ಎಂಬುವರಿಗೆ ವಂಚಿಸಿದ ಸೇವಾಲಾಲ್‌ ಸ್ವಾಮಿ| 

ಬೆಂಗಳೂರು(ಡಿ.22): ಬಗೆದಷ್ಟು ಬಯಲಾಗುತ್ತಿದೆ ಯುವರಾಜ್‌ ಅಲಿಯಾಸ್‌ ಸೇವಾಲಾಲ್‌ ಸ್ವಾಮಿ ವಂಚನೆ ಕೇಸ್‌. ಹೌದು, ಈತನ ವಿರುದ್ಧ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ. ಜಾಗ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ್ದಾನೆ ಈ ಸೇವಾಲಾಲ್‌ ಸ್ವಾಮಿ. 

ಅಪಾರ್ಟ್‌ಮೆಂಟ್‌ಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್; ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಫೈನ್!

ಮೈಸೂರಿನ ಡಾ. ಗುರುರಾಜ್‌ ರವಿ ಎಂಬುವರಿಗೆ ಸೇವಾಲಾಲ್‌ ಸ್ವಾಮಿ ಮೋಸ ಮಾಡಿದ್ದಾನೆ. 6.5 ಕೋಟಿ ರು. ನಗಗು ಹಾಗೂ 85 ಕೋಟಿ ರೂ. ಚೆಕ್‌ ಪಡೆದು ಯುವರಾಜ್‌ ವಂಚಿಸಿದ್ದಾನೆ. ಈ ಸಂಬಂಧ ಡಾ. ಗುರುರಾಜ್‌ ರವಿ ಅವರು ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.