ಕಿರಾತಕರು ಘೋರ ಕೃತ್ಯಕ್ಕೆ ಮೈಸೂರನ್ನೇ ಹುಡುಕೊಂಡಿದ್ದು ಯಾಕೆ?
* ಮೈಸೂರು ಪ್ರಕರಣದ ತನಿಖೆ ಎಲ್ಲಿಯವರೆಗೆ ಬಂತು?
* ಐವರು ಆರೋಪಿಗಳನ್ನು ಸೆರೆ ಹಿಡಿದ ಪೊಲೀಸರು
* ತನಿಖೆ ವೇಳೆ ಸ್ಫೋಟಕ ಮಾಹಿತಿ ಬಾಯಿ ಬಿಟ್ಟ ಕಿರಾತಕರು
* ಹಿಂದಿನ ಪ್ರಕರಣದಲ್ಲಿ ಯಾರೂ ದೂರು ಕೊಟ್ಟಿರಲಿಲ್ಲ
ಮೈಸೂರು(ಆ. 29) ಮೈಸೂರು ಅತ್ಯಾಚಾರ ಪ್ರಕರಣ ತನಿಖೆ ನಡೆಯುತ್ತಿದೆ. ಸಂತ್ರಸ್ತೆಯ ಗೆಳೆಯನಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಕರ್ನಾಟಕ ಪೊಲೀಸರು ತಮಿಳುನಾಡಿನಿಂದ ಕ್ರಿಮಿಗಳನ್ನು ಹೆಡೆಮುರಿ ಕಟ್ಟಿ ಕರೆದುಕೊಂಡು ಬಂದಿದ್ದಾರೆ.
ಬಸ್ ಟಿಕೆಟ್ ಕೊಟ್ಟ ಸುಳಿವು... ರೇಪಿಸ್ಟ್ ಗಳ ಸೆರೆಹಿಡಿದ ಕಾರ್ಯಾಚರಣೆ ಹೇಗಿತ್ತು?
ಅಷ್ಟಕ್ಕೂ ಕಿರಾತಕರು ಮೈಸೂರಿನಲ್ಲಿ ಸಾಕಷ್ಟು ಅಪರಾಧ ಕೃತ್ಯಗಳನ್ನು ಮಾಡಿದ್ದರು. ಜನರು ಮರ್ಯಾದೆಗೆ ಅಂಜಿ ದೂರು ಕೊಟ್ಟಿರಲಿಲ್ಲ. ನಿರ್ಜನ ಪ್ರದೇಶದಲ್ಲಿ ಓಡಾಡುವವರು ಟಾರ್ಗೆಟ್ ಮಾಡಿ ಅವರಿಂದ ಹಣ ದೋಚಿದ್ದರು. ತನಿಖೆ ವೇಳೆ ಒಂದೊಂದೆ ವಿಚಾರ ಬಹಿರಂಗವಾಗುತ್ತಿದೆ.