'ನನ್ನ ಮಗ ಮನೆಯಲ್ಲೇ ಇದ್ದ' ಆರೋಪಿಯ ತಾಯಿಯ ಕಣ್ಣೀರು
* ಮೈಸೂರು ಪ್ರಕರಣದ ತನಿಖೆ ಎಲ್ಲಿಯವರೆಗೆ ಬಂತು?
* ಐವರು ಆರೋಪಿಗಳನ್ನು ಸೆರೆ ಹಿಡಿದ ಪೊಲೀಸರು
* ತನಿಖೆ ವೇಳೆ ಸ್ಫೋಟಕ ಮಾಹಿತಿ ಬಾಯಿ ಬಿಟ್ಟ ಕಿರಾತಕರು
* ತಮಿಳುನಾಡಿನ ತಾಳವಾಡಿ ನಿವಾಸದಲ್ಲಿ ಆರೋಪಿ ತಾಯಿ ಕಣ್ಣೀರು
ಮೈಸೂರು (ಆ. 29) ಮೈಸೂರು ಅತ್ಯಾಚಾರ ಪ್ರಕರಣ ತನಿಖೆ ನಡೆಯುತ್ತಿದೆ. ಸಂತ್ರಸ್ತೆಯ ಗೆಳೆಯನಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಕರ್ನಾಟಕ ಪೊಲೀಸರು ತಮಿಳುನಾಡಿನಿಂದ ಕ್ರಿಮಿಗಳನ್ನು ಹೆಡೆಮುರಿ ಕಟ್ಟಿ ಕರೆದುಕೊಂಡು ಬಂದಿದ್ದಾರೆ.
ಬಸ್ ಟಿಕೆಟ್ ಕೊಟ್ಟ ಸುಳಿವು... ರೇಪಿಸ್ಟ್ ಗಳ ಸೆರೆಹಿಡಿದ ಕಾರ್ಯಾಚರಣೆ ಹೇಗಿತ್ತು?
ಇನ್ನೊಂದು ಕಡೆ ತಮಿಳುನಾಡಿನ ತಾಳವಾಡಿ ನಿವಾಸದಲ್ಲಿ ಆರೋಪಿ ಭೂಪತಿ ತಾಯಿ ಕಣ್ಣೀರು ಹಾಕಿದ್ದಾರೆ. ನನ್ನ ಮಗನಿಗೆ ಏನೂ ಗೊತ್ತಿಲ್ಲ. ಆತ ಮನೆಯಲ್ಲಿ ಮಲಗಿಕೊಂಡಿದ್ದ. ಪೊಲೀಸರು ಯಾವ ಕಾರಣಕ್ಕೆ ಕರೆದುಕೊಂಡು ಹೋದರು ಎನ್ನುವುದು ಗೊತ್ತಿಲ್ಲ ಎಂದಿದ್ದಾರೆ.