Asianet Suvarna News Asianet Suvarna News

ಚಿಕ್ಕೋಡಿ: ಗಣೇಶ ವಿಸರ್ಜನೆ ವೇಳೆ ಯುವಕನಿಗೆ ಚಾಕುವಿನಿಂದ ಇರಿತ

*  ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಡೆದ ಘಟನೆ
*  ಕೊಲ್ಹಾಪುರ ಮೂಲದ ವಿಶಾಲ್‌ ಶಿವಡೆ ಮೇಲೆ ಹಲ್ಲೆ
*  ಡಾಲ್ಬಿ ಸೌಂಡ್‌ ಸಿಸ್ಟಮ್‌ ವೀಕ್ಸಿಸಲು ಬಂದಿದ್ದ ವಿಶಾಲ್‌ 

ಚಿಕ್ಕೋಡಿ(ಸೆ.22): ಗಣೇಶ ವಿಸರ್ಜನೆಗೆ ಬಂದಿದ್ದ ಯುವಕನೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಿನ್ನೆ(ಮಂಗಳವಾರ) ನಡೆದಿದೆ. ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ವಿಶಾಲ್‌ ಶಿವಡೆ ಮೇಲೆ ಅಪರಿಚಿತರು ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಶಾಲ್‌ನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಾಲ್ಬಿ ಸೌಂಡ್‌ ಸಿಸ್ಟಮ್‌ ವೀಕ್ಸಿಸಲು ವಿಶಾಲ್‌ ಬಂದಿದ್ದ ಎಂದು ತಿಳಿದು ಬಂದಿದೆ. ಈ ವೇಳೆ ಯುವಕನಿಗೆ ಚಾಕುವಿನಿಂದ ಇರಿದು ದುಷಷ್ಕರ್ಮಿಗಳು ಪರಾರಿಯಾಗಿದ್ದರು. 

ಶವಗಳೊಂದಿಗೆ ಐದು ದಿನ ಕಳೆದು ಪವಾಡದ ರೀತಿ ಬದುಕಿ ಬಂದ ಮಗುವಿಗೆ ರಕ್ತಪರೀಕ್ಷೆ

Video Top Stories