Asianet Suvarna News Asianet Suvarna News

ಪೊಲೀಸ್ ವಿರುದ್ಧ ಅತ್ಯಾಚಾರ ಸಂತ್ರಸ್ತೆ ಮೌನ ಪ್ರತಿಭಟನೆ

ಕೋಲಾರದ ಶ್ರೀನಿವಾಸಪುರ ಠಾಣೆಯ ಪೊಲೀಸ್ ಪೇದೆ ರವೀಂದ್ರ ಎನ್ನುವವರ ವಿರುದ್ಧ ಮಹಿಳೆ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಹಾಯ ಮಾಡುವ ನೆಪದಲ್ಲಿ ಪೇದೆ ರವೀಂದ್ರ ಬಲವಂತವಾಗಿ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದಾರೆ.

ಕೋಲಾರ(ಜೂ.19): ಪೊಲೀಸ್ ಪೇದೆಯೊಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅರೋಪಿಸಿ ಸಂತ್ರಸ್ಥ ಮಹಿಳೆಯೊಬ್ಬರು ಏಕಾಂಗಿ ಮೌನ ಹೋರಾಟ ನಡೆಸಿದ ಘಟನೆ ಕೋಲಾರದ ಗಾಂಧಿವನ ಎಂಬಲ್ಲಿ ನಡೆದಿದೆ.

ಕೋಲಾರದ ಶ್ರೀನಿವಾಸಪುರ ಠಾಣೆಯ ಪೊಲೀಸ್ ಪೇದೆ ರವೀಂದ್ರ ಎನ್ನುವವರ ವಿರುದ್ಧ ಮಹಿಳೆ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಹಾಯ ಮಾಡುವ ನೆಪದಲ್ಲಿ ಪೇದೆ ರವೀಂದ್ರ ಬಲವಂತವಾಗಿ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದಾರೆ.

ಜಯರಾಜ್ ಬಲಗೈ ಕೊರಂಗು ಕೃಷ್ಣಾ ಇನ್ನಿಲ್ಲ

ಶ್ರೀನಿವಾಸಪುರದ ಮಹಿಳೆ ಗಂಡನ ವಿರುದ್ಧ ಮಾನಸಿಕ ಕಿರುಕುಳ ನೀಡಿದ್ದರ ಕುರಿತು ದೂರು ನೀಡಲು ಠಾಣೆಗೆ ಹೋಗಿದ್ದಾರೆ. ವಿಚಾರಣೆಗೆ ಬಂದಾಗ ಪೇದೆ ದೌರ್ಜನ್ಯ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.