Asianet Suvarna News Asianet Suvarna News

BIG 3: ಕಮರ್ಶಿಯಲ್‌ ಟ್ಯಾಕ್ಸ್‌ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ತಿಮಿಂಗಿಲಗಳಿಗೆ ಬಲೆ ಯಾವಾಗ?

Commercial Taxes Department: ಏಷ್ಯಾನೆಟ್ ಸುವರ್ಣ ನ್ಯೂಸಿನ ಕವರ್ ಸ್ಟೋರಿ ನಡೆಸಿದ ರಣ ರೋಚಕ ಸ್ಟಿಂಗ್ ಆಪರೇಷನ್‌ ವಿಧಾನಸೌಧಕ್ಕೂ ಮುಟ್ಟಿದೆ 

ಬೆಂಗಳೂರು (ನ. 28): ಏಷ್ಯಾನೆಟ್ ಸುವರ್ಣ ನ್ಯೂಸಿನ (Asianet Suvarna News) ಕವರ್ ಸ್ಟೋರಿ ನಡೆಸಿದ ರಣ ರೋಚಕ ಸ್ಟಿಂಗ್ ಆಪರೇಷನ್‌ ವಿಧಾನಸೌಧಕ್ಕೂ ಮುಟ್ಟಿದೆ. ವಾಣಿಜ್ಯ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚರ ನೋಡಿ ಇಡೀ ರಾಜ್ಯವೇ ಅಲ್ಲೋಲ, ಕಲ್ಲೋಲವಾಗಿದೆ. ಆದ್ರೆ, ಮೀನನ್ನ ಹಿಡಿದು, ತಿಮಿಂಗಿಲ ರಕ್ಷಣೆಗೆ ನಿಂತಿದ್ದಾರಾ ದೊಡ್ಡವರು ಅನ್ನೋ ಅನುಮಾನ ಶುರುವ. ಹೀಗಾಗಿ ಕವರ್ ಸ್ಟೋರಿ + ಬಿಗ್3 ಭ್ರಷ್ಟರ ಬೇಟೆ ಕಂಟಿನ್ಯೂ ಮಾಡ್ತಿದೆ. ಯೆಸ್, ಇದು ಕವರ್ ಸ್ಟೋರಿ + ಬಿಗ್3ಯ ರಣರೋಚಕ ಸ್ಟಿಂಗ್ ಆಪರೇಷನ್. ಕರ್ನಾಟಕ ಮಾಧ್ಯಮ ಲೋಕದ ಇತಿಹಸದಲ್ಲಿಯೇ ಅತಿದೊಡ್ಡ ರಹಸ್ಯ ಕಾರ್ಯಾಚರಣೆ. ಅಷ್ಟಕ್ಕೂ, ಏಷ್ಯಾನೆಟ್ ಸುವರ್ಣ ನ್ಯೂಸ್ ಕವರ್ ಸ್ಟೋರಿ ಭ್ರಷ್ಟರ ಮುಖವಾಡ ಬಯಲು ಮಾಡ್ತಿದ್ದಂಗೆ ಸರ್ಕಾರ ಎಚ್ಚೆತ್ತಿದೆ. ಮೇಲಾಧಿಕಾರಿಗಳು ಮೀನನ್ನ ಹಿಡಿದು ತಿಮಿಂಗಿಲಗಳಿಗೆ ಹಂಗೇ ಬಿಟ್ಟಿದ್ದಾರೆ. ಇದ್ಯಾಕೇ ಅನ್ನೋ ಪ್ರಶ್ನೆ ಈಗ ಮೂಡುತ್ತಿದೆ 

ವಾಣಿಜ್ಯ ತೆರಿಗೆ ಭ್ರಷ್ಟ ಅಧಿಕಾರಿಗಳ ಅಮಾನತು ತಾತ್ಕಾಲಿಕ: ಬಿಜೆಪಿ ವಿರುದ್ಧ ಕುಮಾರಸ್ವಾಮಿ ಕಿಡಿ

Video Top Stories