Asianet Suvarna News Asianet Suvarna News

ಮೇಲುಕೋಟೆ ಶಾಲೆಗೆ ಹೋದ ಹಳ್ಳಿ ಮೇಡಂ ದುರಂತ ಅಂತ್ಯ: ಅಕ್ಕ ಅಕ್ಕ ಅಂತಿದ್ದವನೇ ಹೆಣವಾಕಿದ!

ಮೇಲುಕೋಟೆಯ ಶಾಲೆಗೆ ಪಾಠ ಮಾಡಲು ಹೋದ ಸುಂದರಿ ಹಳ್ಳಿ ಮೇಡಂ ದೀಪಿಕಾ ದುರಂತ ಅಂತ್ಯವಾಗಿದ್ದಾಳೆ. ಅಕ್ಕ ಅಕ್ಕ ಎನ್ನುತ್ತಿದ್ದವನೇ ಆಕೆಯ ಹೆಣಗೆಡವಿದ್ದಾನೆ.

ಮಂಡ್ಯ (ಜ.24): ಆಕೆ ಹೈಸ್ಕೂಲ್ ಟೀಚರ್.. ಮೇಲುಕೋಟೆಯ ಶಾಲೆಗೆ ಹೋಗಿ ಮಕ್ಕಳಿಗೆ ಪಾಠ ಮಾಡಿ ಬರ್ತಿದ್ದಳು. ಆದ್ರೆ ಆವತ್ತೊಂದು ದಿನ ಶಾಲೆಗೆ ಹೋಗಿದ್ದ ಸುಂದರಿ ಶಿಕ್ಷಕಿ ವಾಪಸ್ ಮನೆಗೆ ಬರಲೇ ಇಲ್ಲ. ಸಂಜೆವರೆಗೆ ಆಕೆಗಾಗಿ ಆಕೆಯ ಕುಟುಂಬ ಹುಡುಕಬಾರದ ಜಾಗದಲ್ಲೆಲ್ಲಾ ಹುಡುಕಾಡಿತ್ತು. ಆದ್ರೆ ಆಕೆಯ ಸುಳಿವು ಮಾತ್ರ ಸಿಗಲೇ ಇಲ್ಲ. ನಾಪತ್ತೆ ಕೇಸ್ ದಾಖಲಾಯ್ತು. ಆದ್ರೆ ಶಿಕ್ಷಕಿ ಮಿಸ್ಸಿಂಗ್ ಆಗಿ 2 ದಿನದ ನಂತರ ಶಿಕ್ಷಕಿಯ ಮೃತದೇಹ ಮೇಲುಕೋಟೆಯ ಬೆಟ್ಟದ ತಪ್ಪಲಿನಲ್ಲಿ ಸಿಕ್ಕಿತ್ತು. ಹಾಗಾದ್ರೆ ಆ ಶಿಕ್ಷಕಿಗೆ ಏನಾಯ್ತು..? ಆಕೆಯನ್ನ ಕೊಲೆ ಮಾಡಲಾಗಿತ್ತಾ..? ಎಂಬ ಪ್ರಶ್ನೆ ಎದುರಾದವು.

ಮಗನ ಬರ್ತಡೇ ತಯಾರಿಯಲ್ಲಿದ್ದ ತಾಯಿ ಆವತ್ತು ಹೆಣವಾಗಿ ಸಿಕ್ಕಿದ್ರೆ, ತಂದೆ ಹೆಂಡತಿಯನ್ನ ಕಳೆದುಕೊಂಡು ಕಣ್ಣೀರು ಹಾಕ್ತಿದ್ದ. ಅಷ್ಟಕ್ಕೂ ಶಾಲೆಗೆ ಹೋಗಿದ್ದ ಟೀಚರ್ ದೀಪಿಕಾ ಮೇಲುಕೋಟೆಯ ಬೆಟ್ಟದ ತಪ್ಪಲಿನಲ್ಲಿ ಹೆಣವಾಗಿ ಸಿಕ್ಕಿದ್ದೇಗೆ.? ಆವತ್ತು ಆ ಬೆಟ್ಟದಲ್ಲಿ ನಡೆದಿದ್ದೇನು.? ಆಕೆ ಫೋನ್ ಕಾಲ್ ಡಿಟೇಲ್ಸ್ ಪರಿಶೀಲಿಸಿದ ಪೊಲೀಸರಿಗೆ ಆಕೆಗೆ ಬಂದಿದ್ದ ಲಾಸ್ಟ್ ಕಾಲ್, ಹಂತಕನ ಸುಳಿವು ಕೊಟ್ಟಿತ್ತು.

ಮೇಲುಕೋಟೆ ಶಿಕ್ಷಕಿ ಹಂತಕ ಹೊಸಪೇಟೆಯಲ್ಲಿ ಅರೆಸ್ಟ್: 'ಅಪ್ಪಾಜಿ ದೀಪಿಕಾ ಅಕ್ಕಾ ಸಿಕ್ಕಿದ್ರಾ' ಅಂತ ಕೇಳಿದ್ದ ಕೊಲೆಗಾರ!

ಶಾಲೆಗೆ ಹೋದ ದೀಪಿಕಾ ಮಕ್ಕಳಿಗೆ ಪಾಠ ಮಾಡಿ ವಾಪಸ್ ಬರುತ್ತಿದ್ದಳು. ಇದೇ ವೇಳೆಯಲ್ಲೇ ಆಕೆಗೆ ಒಂದು ಕಾಲ್ ಬಂದಿತ್ತು. ಕಾಲ್ ಮಾಡಿದವನು ಆಕೆಗೆ ಗೊತ್ತಿದ್ದವನೇ ಆಗಿದ್ದನು. ಅಕ್ಕ ಅಕ್ಕ ಅಂತ ಬಾಯಿ ತುಂಬ ಕರೆದು ಆ ಕುಟುಂಬಕ್ಕೆ ಹತ್ತಿರವಾಗಿದ್ದವನು. ಇನ್ನೂ ಆತ ಕರೆದ ಅಂತ ಹೇಳಿದ ಜಾಗಕ್ಕೆ ಟೀಚರ್ ದೀಪಿಕಾ ಹೋಗಿದ್ದಳು. ಆದ್ರೆ ಅಲ್ಲಿ ಅದೇನು ಮಾತುಕತೆ ಆಯ್ತೋ ಏನೋ. ಇಬ್ಬರಿಗೂ ಜಗಳವಾಗಿದೆ. ಆ ಜಗಳವನ್ನ ಅಲ್ಲಿಗೆ ಬಂದಿದ್ದ ಪ್ರವಾಸಿಗರೊಬ್ಬರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಆದ್ರೆ ನಂತರ ಆಕೆ ಹೆಣವಾಗಿ ಸಿಗ್ತಾಳೆ. ದೀಪಿಕಾ ಡೆಡ್ ಬಾಡಿ ಸಿಗುವ ಹೊತ್ತಿಗೆ ತಮ್ಮನಂತಿದ್ದವನು ಊರುಬಿಟ್ಟಿದ್ದನು. ಈಗ ಹಂತಕ ಸಿಕ್ಕಿ ಬಿದ್ದಿದ್ದಾನೆ. ಅಕ್ಕ ಅಕ್ಕ ಬಾಯಿ ತುಂಬಾ ಕರೆಯುತ್ತಿದ್ದವನೇ ಯಾಕೆ ಕೊಂದ ಅನ್ನೋದನ್ನ ಬಾಯಿಬಿಡಬೇಕು. ಆದ್ರೆ ದೀಪಿಕಾ ಸಾವಿನಿಂದ ಆಕೆಯ ಮಗು ಈಗ ತಬ್ಬಲಿ ಆಗಿರೋದು ನಿಜಕ್ಕೂ ದುರಂತ.

Video Top Stories