ವಿಚಾರಣೆ ಮುಗಿಸಿ ಹೊರಬಂದ ಇಂದ್ರಜಿತ್, ರವಿ ಬೆಳಗೆರೆಗೆ ಹಿಗ್ಗಾಮುಗ್ಗಾ ತರಾಟೆ!
- ಬೆಂಗಳೂರು ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ಇಂದ್ರಜಿತ್ ಲಂಕೇಶ್
- ಏನೆಲ್ಲಾ ಗೊತ್ತಿತ್ತೋ ಅದನ್ನು ಸಾಕ್ಷಿ ಸಮೇತ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದೇನೆ
- ರವಿ ಬೆಳಗೆರೆ ವಿರುದ್ಧ ವಾಗ್ದಾಳಿ ನಡೆಸಿದ ಇಂದ್ರಜಿತ್ ಲಂಕೇಶ್
ಬೆಂಗಳೂರು (ಆ.31): ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಹಾವಳಿ ವಿಚಾರದಲ್ಲಿ ಬೆಂಗಳೂರು ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ಇಂದ್ರಜಿತ್ ಲಂಕೇಶ್, ತನಗೆ ಏನೆಲ್ಲಾ ಗೊತ್ತಿತ್ತೋ ಅದನ್ನು ಸಾಕ್ಷಿ ಸಮೇತ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದೇನೆ ಎಂದಿದ್ದಾರೆ.
ಇದನ್ನೂ ನೋಡಿ | ಸ್ಯಾಂಡಲ್ವುಡ್ಗೆ ನಶೆ; ಇಂದ್ರಜಿತ್ ಹೇಳಿದ 20 ಜನ ಸ್ಟಾರ್ ನಟ, ನಟಿಯರ ಹೆಸರು!?...
ಇದೇ ಸಂದರ್ಭದಲ್ಲಿ ಪತ್ರಕರ್ತ ರವಿ ಬೆಳಗೆರೆ ವಿರುದ್ಧವೂ ಇಂದ್ರಜಿತ್ ಲಂಕೇಶ್ ವಾಗ್ದಾಳಿ ನಡೆಸಿದ್ದಾರೆ. ತನಿಖೆ ದೃಷ್ಟಿಯಿಂದ ಯಾವುದೇ ಮಾಹಿತಿ ತಾನು ಬಹಿರಂಗಪಡಿಸಲ್ಲ, ಪೊಲೀಸ್ ಅಧಿಕಾರಿಗಳನ್ನೇ ಕೇಳಿ ಎಂದು ಇಂದ್ರಜಿತ್ ತಿಳಿಸಿದರು.