ಸ್ವತಃ ಮಗಳ ಚಿನ್ನ, ಹಣ ಎಗರಿಸಲು ಹೋಗಿ ಸಿಕ್ಕಿಬಿದ್ದ ತಂದೆ, ತಾಯಿ..!
- ಮಗಳ ಒಡವೆ ಕದ್ದು ಪೊಲೀಸರ ಅತಿಥಿಗಳಾದ ಹೆತ್ತವರು
- ಹಾಸನ ಜಿಲ್ಲೆಯ ಬೇಲೂರಿನಲ್ಲಿ ವಿಚಿತ್ರ ಕ್ರೈಂ ಪ್ರಕರಣ
- ಕಲ್ಲೇಶ್ ಆಚಾರ್ ಮತ್ತು ಮಮತಾ ಬಂಧಿತ ದಂಪತಿ
ಹಾಸನ (ಆ. 14): ಬೇಲೂರಿನಲ್ಲೊಂದು ವಿಚಿತ್ರ ಕ್ರೈಂ ಪ್ರಕರಣ ನಡೆದಿದೆ. ಹೆತ್ತವರ ಮನೆಯಲ್ಲಿ ಸುರಕ್ಷಿತವಾಗಿರುತ್ತದೆಯೆಂದು 2 ಲಕ್ಷದ 25 ಸಾವಿರ ಬೆಲೆಬಾಳುವ ಚಿನ್ನಾಭರಣ ಇಟ್ಟಿದ್ದ ಮಗಳು. ವಿಪರ್ಯಾಸವೆಂದರೆ ಆ ಚಿನ್ನಾಭರಣಗಳನ್ನು ತಂದೆ ತಾಯಿಯರೇ ಕಳ್ಳತನ ಮಾಡಿದ್ದಾರೆ.
ಮಕ್ಕಳಾಗುತ್ತಿಲ್ಲ ಪರಿಹಾರ ಕೊಡಿ ಎಂದು ಬಂದವಳ ಮಂಚಕ್ಕೆ ಕರೆದ ಮಾಟಗಾರ!
ಮನೆಯಲ್ಲಿ ಕಳ್ಳತನವಾಗಿದೆಯಂದು ಮಗಳನ್ನು ನಂಬಿಸಿದ್ದರು. ಮಗಳು ರೇಖಾ ಪೊಲೀಸರಿಗೆ ದೂರು ನೀಡಿದ್ದಾಳೆ. ವಿಚಾರಣೆ ವೇಳೆ ತಂದೆ ತಾಯಿಯರೇ ಕದ್ದಿರುವುದು ಬೆಳಕಿಗೆ ಬಂದಿದೆ. ಕಲ್ಲೇಶ್ ಆಚಾರ್ ಮತ್ತು ಮಮತಾ ಬಂಧಿತ ದಂಪತಿ. ಬೇಲೂರು ಗುರಪ್ಪಗೌಡ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಬೇಲೂರು ನಗರ ನಟರಾಜ್ ಜೊತೆ ರೇಖಾಳ ಮದುವೆ ಮಾಡಿಕೊಡಲಾಗಿತ್ತು. ಪಟ್ಟಣದಲ್ಲೆ ಇದ್ದ ತಾಯಿ ಮನೆಗೆ ಚಿನ್ನಾಭರಣ, 50 ಸಾವಿರ ನಗದು ಇಟ್ಟಿದ್ದ ಮಗಳು.