Asianet Suvarna News Asianet Suvarna News

ಹಾಸನ ಅಧಿಕಾರಿಗಳಿಂದ ಹಾಸಿಗೆ-ಮಂಚ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

* ಹಾಸನದಲ್ಲಿ ಅಧಿಕಾರಿಗಳದ್ದೇ ದರ್ಬಾರ್
* ಹಗರಣ ಬಯಲಿಗೆ ಎಳೆದ ಆರ್‌ಟಿಐ ಕಾರ್ಯಕರ್ತ
* ಹಾಸಿಗೆ-ದಿಂಬು-ಮಂಚ ಖರೀದಿಯಲ್ಲಿ ಬ್ರಹಾಂಡ ಭ್ರಷ್ಟಾಚಾರ
* ಟೆಂಡರ್ ಕರೆಯದೇ ಅಧಿಕಾರಿಗಳಿಂದಲೇ ವಸ್ತು ಖರೀದಿ

ಹಾಸನ(ಆ. 04)  ಹಾಸನದಲ್ಲಿ ಅಧಿಕಾರಿಗಳ ದರ್ಪ-ಅವ್ಯವಹಾರ ಹೇಳೋರಿಲ್ಲ ಕೇಳೋರಿಲ್ಲ. ಹಿಂದುಳಿದ ವರ್ಗಗಳ ಇಲಾಖೆಯ ಹಣದಲ್ಲಿ ಗೋಲ್ ಮಾಲ್ ಆಗಿದೆ ಎನ್ನುವ ಆರೋಪ ಬಂದಿದೆ. ಹಾಸಿಗೆ-ದಿಂಬು-ಮಂಚ ಖರೀದಿಯಲ್ಲಿ ಭಾರೀ ಅಕ್ರಮವಾಗಿರುವ ವಾಸನೆ ಬಂದಿದೆ.

ದೃಶ್ಯಂ ಸಿನಿಮಾ  ರೀತಿಯದ್ದೇ ಮರ್ಡರ್ ಸ್ಟೋರಿ

ಆರ್‌ಟಿಐ ಕಾರ್ಯಕರ್ತ ವಾಗೀಶ್ ಹಗರಣವನ್ನು ಬಯಲಿಗೆ ಎಳೆದಿದ್ದಾರೆ. ಹಾಸಿಗೆ ಖರೀದಿಯಲ್ಲಿ ದೊಡ್ಡ ಮೊತ್ತವನ್ನು ಗುಳುಂ ಮಾಡಿದ್ದಾರೆ. ಟೆಂಡರ್ ಕರೆಯದೇ ವಸ್ತುಗಳನ್ನು ಅಧಿಕಾರಿಗಳೇ ಖರೀದಿ ಮಾಡಿದ್ದಾರೆ. ಅನುದಾನದ ಹಣದಲ್ಲಿ ಅಧಿಕಾರಿಗಳು ಹಬ್ಬ ಮಾಡಿದ್ದಾರೆ ಎನ್ನಲಾಗುತ್ತಿದೆ. 

Video Top Stories