Asianet Suvarna News Asianet Suvarna News

10 ಸಾವಿರ ರೂಪಾಯಿಗೆ ಮಾರಾಮಾರಿ: ಆಸ್ಪತ್ರೆ, ಬಸ್‌ ನಿಲ್ದಾಣ ಎರಡೂ ಕಡೆ ಗಲಾಟೆ

ಹಣಕಾಸು ವಿಚಾರವಾಗಿ ಲಕ್ಷ್ಮೇಶ್ವರ ಪಟ್ಟಣದಲ್ಲಿ ಗಲಾಟೆ
ಹೊಡೆದಾಟದ ದೃಶ್ಯ ಸ್ಥಳೀಯರ ಮೊಬೈಲ್,ಸಿಸಿಟಿವಿ ಸೆರೆ
ಗದಗದ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಿನ್ನೆ ನಡೆದ ಘಟನೆ 

ಗದಗ: ಹಣಕಾಸು ವಿಚಾರವಾಗಿ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ(Lakshmeshwar town) ಹೊಡೆದಾಟ ನಡೆದಿದೆ. ಈ ಗಲಾಟೆ ದೃಶ್ಯ ಸ್ಥಳೀಯರ ಮೊಬೈಲ್, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗದಗ(Gadag) ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶುಕ್ರವಾರ ತಡರಾತ್ರಿ ಘಟನೆ ನಡೆದಿದೆ. ಲಕ್ಷ್ಮೇಶ್ವರ ಆಸ್ಪತ್ರೆಯ ಆವರಣ ಹಾಗೂ ಬಸ್‌ ನಿಲ್ದಾಣದ ಎದುರು ಹೊಡೆದಾಟ(fight) ನಡೆದಿದೆ. ಈ ಗಲಾಟೆಯಲ್ಲಿ ಹಲವರಿಗೆ ಗಂಭೀರ ಗಾಯವಾಗಿದೆ. ಮೈನುದ್ದೀನ್ ಹಾಗೂ ಸಾಬೀರ್ ಎನ್ನುವವರ ಮಧ್ಯೆ ಗಲಾಟೆ ನಡೆದಿದೆ. 10 ಸಾವಿರ ರೂಪಾಯಿ ಹಣದ ವ್ಯವಹಾರ ವಿಚಾರವಾಗಿ ಗಲಾಟೆ ನಡೆದಿದೆ ಎನ್ನಲಾಗ್ತಿದೆ. ಈ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇದನ್ನೂ ವೀಕ್ಷಿಸಿ:  ತಮಿಳುನಾಡಲ್ಲಿ ಕನ್ನಡ ಡಿಂಡಿಮ ಬಾರಿಸಿದ ಸುದೀಪ್: ತಮಿಳು ನಿರ್ಮಾಪಕರಾದ್ರೂ, ಕನ್ನಡಿಗರದ್ದೇ ಹವಾ!