ಸಿಸಿಬಿ ಪ್ರಶ್ನೆಗಳಿಗೆ ಸಂಪತ್ರಾಜ್ ತಬ್ಬಿಬ್ಬು.. ಕೊಟ್ಟಿದ್ದು ಒಂದೇ ಉತ್ತರ!
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ/ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಇಟ್ಟಿದ್ದ ದುರುಳರು/ ನಾಪತ್ತೆಯಾಗಿದ್ದ ಸಂಪತ್ ರಾಜ್ ಅರೆಸ್ಟ್/ ಸತತ ವಿಚಾರಣೆ ನಡೆಸುತ್ತಿರುವ ಸಿಸಿಬಿ
ಬೆಂಗಳೂರು(ನ. 17) ಸತತ ಐದು ಗಂಟೆಗಳಿಂದ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಸಿಸಿಬಿ ವಿಚಾರಣೆ ಮಾಡುತ್ತಿದೆ. ನಾಗರಹೊಳೆಯಿಂದ ಎಲ್ಲಿಗೆ ಹೋಗಿದ್ದೀರಿ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಸಂಪತ್ ಗೆ ಶಿಕ್ಷೆಯಾಗಬೇಕು; ಅಖಂಡ ಆಗ್ರಹ
ಸ್ನೇಹಿತನ ಆಶ್ರಯದಲ್ಲಿ ಫಾರ್ಮ್ ಹೌಸ್ ನಲ್ಲಿ ಇದ್ದೆ ಎಂದಷ್ಟೆ ಹೇಳುತ್ತಿರುವ ಸಂಪತ್ ರಾಜ್ ಯಾವ ವಿಚಾರವನ್ನು ಮಾತನಾಡುತ್ತಿಲ್ಲ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಸೋಮವಾರ ತಡರಾತ್ರಿ ಸಂಪತ್ ರಾಜ್ ರನ್ನು ಬಂಧನ ಮಾಡಿತ್ತು