ಜೈಲಿನಲ್ಲಿದ್ದೇ ಮಾಜಿ ಮೇಯರ್ ಮಾಡಿದ್ದ 'ಬೆಂಕಿ' ಪ್ಲಾನ್ ಫ್ಲಾಪ್!
ಸಂಪತ್ ರಾಜ್ ಹೈಡ್ರಾಮಾ/ ಆರೋಗ್ಯ ಸಮಸ್ಯೆ ಇದೆ ಎಂದು ಆಸ್ಪತ್ರೆಗೆ ದಾಖಲಾಗುವ ಯತ್ನ/ ವೈದ್ಯರು ಪರೀಕ್ಷೆ ನಡೆಸಿ ಅಡ್ಮಿಟ್ ಆಗುವ ಅಗತ್ಯ ಇಲ್ಲ ಎಂದ್ರು/ ಬೆಂಕಿ ಪ್ಲಾನ್ ಮಾಡಿದ್ದ ಮಾಜಿ ಮೇಯರ್
ಬೆಂಗಳೂರು(ನ. 22) ಡಿಜೆ ಹಳ್ಳಿ ಗಲಭೆ ಮತ್ತು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿ ಕೊನೆಗೂ ಸಿಸಿಬಿ ಪ್ರಮುಖ ಆರೋಪಿ ಸಂಪತ್ ರಾಜ್ ರನ್ನು ಬಂಧಿಸಿ ವಿಚಾರಣೆ ನಡೆಸಿದೆ. ಸಂಪತ್ ರಾಜ್ ರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಕಾಂಗ್ರೆಸ್ನಿಂದ ಉಚ್ಚಾಟನೆಯಾಗ್ತಾರಾ ಸಂಪತ್ ರಾಜ್?
ಆದರೆ ಇಲ್ಲಿಯೂ ಸಂಪತ್ ರಾಜ್ ಹೈಡ್ರಾಮಾ ಮಾಡಿದ್ದಾರೆ. ನನಗೆ ಆರೋಗ್ಯ ಸಮಸ್ಯೆ ಇದೆ ಎಂದು ಹೇಳಿ ಆಸ್ಪತ್ರೆಗೆ ದಾಖಲಾಗುವ ಪ್ಲಾನ್ ಮಾಡಿದ್ದರು ಮಾಜಿ ಮೇಯರ್.. ಆದರೆ ಅದೆಲ್ಲವೂ ಫ್ಲಾಪ್ ಆಗಿದೆ.