ಅನಾಮಿಕ ಪತ್ರ ತೆರೆದಿಟ್ಟ ಪ್ರವಾಸೋದ್ಯಮ ಇಲಾಖೆ ಬ್ರಹ್ಮಾಂಡ ಭ್ರಷ್ಟಾಚಾರ!
* ಪ್ರವಾಸೋದ್ಯಮ ಇಲಾಖೆಯ ದೊಡ್ಡ ಹಗರಣದ ಬೆನ್ನು ಬಿದ್ದ ಕವರ್ ಸ್ಟೋರಿ ತಂಡ
* ತುಮಕೂರು ಪ್ರವಾಸೋದ್ಯಮ ಇಲಾಖೆಯಲ್ಲಿ ಅಕ್ರಮ
* ಏಷ್ಯಾನೆಟ್ ಕವರ್ ಸ್ಟೋರಿ ತಂಡಕ್ಕೆ ಬಂದ ಅನಾಮಿಕ ಪತ್ರ
* ಟ್ಯಾಕ್ಸಿ ನೀಡುವ ಯೋಜನೆಯಲ್ಲಿ ಗೋಲ್ ಮಾಲ್
ತುಮಕೂರು(ಆ. 21) ಕವರ್ ಸ್ಟೋರಿ ತಂಡ ಈ ಬಾರಿ ಮತ್ತೊಂದು ರೋಚಕ ಸ್ಟೋರಿಯನ್ನು ನಿಮ್ಮ ಮುಂದೆ ಇಡುತ್ತಿದೆ. ಬಡವರು, ಕೂಲಿ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯವನ್ನು ಯಾವ ರೀತಿ ಹರಾಜಿಗೆ ಇಟ್ಟಿದ್ದಾರೆ ಎಂಬುದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ..
ಫುಲ್ ನೈಟ್ ಐದು ಸಾವಿರ..ತಾಸಿಗೆ ಇಷ್ಟು.. ಬೆಂಗಳೂರಿನ ನಶೆ ರಾಣಿಯರು
ಪ್ರವಾಸೋದ್ಯಮ ಇಲಾಖೆಯ ಕಾರ್ಯಕ್ರಮಗಳು ಯಾವ ರೀತಿ ಹಳ್ಳ ಹಿಡಿದಿವೆ ಎಂಬುದಕ್ಕೆ ಈ ವರದಿಯೇ ಸಾಕ್ಷಿ. ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಬಂದ ಅನಾಮಿಕ ಪತ್ರವೊಂದು ದಾರುಣ ಸತ್ಯವನ್ನು ತೆಗೆದಿರಿಸಿದೆ. ಅರ್ಹತೆ ಆಧಾರದ ಮೇಲೆ ನೀಡಬೇಕಾಗಿದ್ದ ಟ್ಯಾಕ್ಸಿ ಮಧ್ಯವರರ್ತಿಗಳ ಪಾಲಾಗುತ್ತಿದೆ ಎಂಬುದು ಗೊತ್ತಾಗುತ್ತಿದೆ. ಪತ್ರದ ಜತೆ ಸಾಕ್ಷ್ಯವನ್ನು ಕಳುಹಿಸಿಕೊಡಲಾಗಿತ್ತು.