Asianet Suvarna News Asianet Suvarna News

Coronavirus In Karnataka: ಪಾಸ್ ವ್ಯವಸ್ಥೆ ಇಲ್ಲ, ಹೊರಗೆ ಬಂದರೆ ವಾಹನ ಸೀಝ್!

* ಕರ್ನಾಟಕದಲ್ಲಿ ಕೊರೋನಾ ನಿಯಮಗಳು ಕಟ್ಟುನಿಟ್ಟು
* ಸುಮ್ಮನೆ ಓಡಾಡಿದರೆ ಅಲ್ಲಿಯೇ ವಾಹನ ಸೀಜ್
* ಜನರ ಸಹಕಾರ ಅಗತ್ಯ ಎಂದು ಮನವಿ ಮಾಡಿಕೊಂಡ ಕಮಲ್ ಪಂತ್

ಬೆಂಗಳೂರು(ಜ. 07) ಕೊರೋನಾ (Coronavirus) ಏರಿಕೆ ಕಾರಣಕ್ಕೆ ಬೆಂಗಳೂರು (Bengaluru Police) ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. ವೀಕೆಂಡ್ ಕರ್ಫ್ಯೂ (Weekend Curfew) ವೇಳೆ ಸುಮ್ಮನೆ ಓಡಾಡಿದರೆ ವಾಹನವನ್ನು ಅಲ್ಲಿಯೇ ಸೀಜ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಮನಗರದಲ್ಲಿ ಕಟ್ಟುನಿಟ್ಟಿನ ನಿಷೇಧಾಜ್ಞೆ

ಪೊಲೀಸರ ಜತೆ ಮತ್ತು ಸಂಸ್ಥೆಗಳ ಜತೆ ಸಹಕಾರ ನೀಡಬೇಕು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ (Kamal Pant)ಮನವಿ ಮಾಡಿಕೊಂಡಿದ್ದಾರೆ. ಕಾನೂನು ಮೀರಿದವರ ಮೇಲೆ ಕಟ್ಟು ನಿಟ್ಟಿನ  ಕ್ರಮ ಇದ್ದು ಯಾವ ಪಾಸ್ ಕೊಡುವ ವ್ಯವಸ್ಥೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.