ಬೆಂಗಳೂರು; 'ಬಿಲ್ ಪೇ ಮಾಡಿ' ವ್ಯಕ್ತಿ ನಿಧನವಾಗಿ 3 ದಿನವಾದರೂ ಶವ ಹಸ್ತಾಂತರಿಸದ ಆಸ್ಪತ್ರೆ!
ಕೊರೋನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳ ಸುಲಿಗೆ/ ವ್ಯಕ್ತಿ ತೀರಿ ಮೂರು ದಿನವಾದರೂ ಶವ ಹಸ್ತಾಂತರ ಮಾಡದ ಆಸ್ಪತ್ರೆ/ ಆಸ್ಪತ್ರೆಗೆ ಹಣವೇ ಮುಖ್ಯವಾಯಿತಾ?
ಬೆಂಗಳೂರು(ಜೂ. 28) ಕೊರೋನಾ ಹೆಸರಲ್ಲಿ ಸುಲಿಗೆ ಶುರುವಾಗಿದೆ. ಮೃತದೇಹ ಇಟ್ಟುಕೊಂಡು ವ್ಯವಹಾರ ನಡೆಯುತ್ತಿದೆ. ಸಾವಿಗಿಂತ ಆಸ್ಪತ್ರೆಗೆ ಹಣವೇ ಮುಖ್ಯವಾಗಿದೆ.
ಕೊರೋನಾ ಭಯಕ್ಕೆ ಬೆಂಗಳೂರು ತೊರೆಯುತ್ತಿದ್ದಾರೆ ಜನ
ಕೊರೋನಾ ಸೋಂಕಿಗೆ ತುತ್ತಾದ ವ್ಯಕ್ತಿ ನಿಧನರಾಗಿ ಮೂರು ದಿನ ಕಳೆದರೂ ಸಂಬಂಧಿಕರಿಗೆ ಶವ ಹಸ್ತಾಂತರ ಮಾಡದೆ ಕಷ್ಟ ನೀಡಲಾಗುತ್ತಿದೆ. ಬಿಲ್ ಕಟ್ಟಿ ಮೃತದೇಹ ಕೊಂಡೊಯ್ಯಿರಿ ಎಂದು ಆಸ್ಪತ್ರೆ ಹೇಳುತ್ತಿದೆ.