Asianet Suvarna News Asianet Suvarna News

ಹೆಂಡತಿ ಡಿವೋರ್ಸ್ ಕೊಟ್ಟಳು..ಸ್ನೇಹಿತೆ ಕಂಪ್ಲೆಂಟ್ ಕೊಟ್ಟಳು..! ಆ ಅಧಿಕಾರಿ ಕಥೆ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಿ..!

ವರ್ಷದ ಹಿಂದೆ ಸಹೊದ್ಯೋಗಿಯ ಜೊತೆ ಲವ್ವಿಡವ್ವಿ..!
ಊರು ಬಿಟ್ಟರೂ ಬುದ್ಧಿ ಕಲಿಯಲಿಲ್ಲ IAS ಆಫೀಸರ್..!
ದೇವಸ್ಥಾನಕ್ಕೆ ಹೋಗಿ ಬಂದು ಪ್ರೇಯಸಿಗೆ ಹೊಡೆದಿದ್ದ..!

First Published Feb 2, 2024, 3:58 PM IST | Last Updated Feb 2, 2024, 3:58 PM IST

ಆತ ವಿವಾದಿತ IPS ಆಫೀಸರ್. ಕೆಲಸ ಮಾಡಿದ್ದಕ್ಕಿಂತ ವೈಯಕ್ತಿಕ ಜೀವನದ  ವಿವಾದಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಆದ್ರೆ ಇವತ್ತು ಇದೇ ಕಿರಿಕ್ ಆಫೀಸರ್ ಮತ್ತೊಂದು ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅದರಲ್ಲೂ ಪಕ್ಕದ ರಾಜ್ಯ ತಮಿಳುನಾಡಿಗೆ(Tamilnadu) ಹೋಗಿ ತಮ್ಮ ಪೌರುಷವನ್ನ ತೋರಿಸಲು ಹೋಗಿ ಅರೆಸ್ಟ್ ಆಗಿದ್ದಾರೆ. ಈ ಮೂಲಕ ಕರ್ನಾಟಕದ(Karnataka) ಮರ್ಯಾದೆಯನ್ನ ಹರಾಜ್ ಹಾಕಿದ್ದಾರೆ. ತನ್ನ ಪತ್ನಿಗೆ(Wife) ಡಿವೋರ್ಸ್ ಕೊಟ್ಟು.. ನಂತರ ಆಕೆಯ ಮನೆ ಮುಂದೆ ಪ್ರತಿಭಟನೆಗೆ ಕೂತಿದ್ದ ಅರುಣ್ ರಂಗರಾಜನ್( Arun Rangarajan) ನಂತರ ತನ್ನದೇ ಅಫೀಸ್‌ನಲ್ಲಿ ಕೆಲಸ ಮಾಡ್ತಿದ್ದ ASIರನ್ನ ತನ್ನ ಮನೆಗೆ ಕರೆದುಕೊಂಡು ಬಂದು ಇರಿಸಿಕೊಂಡಿದ್ರು. ಹೀಗೆ ಸದಾ ವಿವಾದಗಳಿಂದಲೇ ಸುದ್ದಿಯಾಗೋ ಐಪಿಎಸ್ ಅಧಿಕಾರಿ ಸದ್ಯ  ತಮಿಳುನಾಡಿನಲ್ಲಿ ಅರೆಸ್ಟ್ ಆಗಿದ್ದಾರೆ. 10 ತಿಂಗಳ  ಹಿಂದಷ್ಟೇ ಸಹೋದ್ಯೋಗಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪದ ಮೇಲೆ ಕೇಸ್ ಹಾಕಿಸಿಕೊಂಡಿದ್ದ ಎಸ್.ಪಿ ಅರುಣ್ ರಂಗರಾಜನ್ ನಂತರ ಧಾರವಾಡಕ್ಕೆ(Dharwad) ವರ್ಗಾವಣೆಗೊಂಡರು. ಆಗ ಅವರ ಪ್ರೇಯಸಿಯನ್ನೂ ಕರೆದುಕೊಂಡು ಹೋಗಿದ್ರು.. ಇಷ್ಟೆಲ್ಲಾ ಆಗಿ ಕೆಲ ತಿಂಗಳುಗಳಾಗಿದೆ ಅಷ್ಟೇ.. ಈಗ ಇದೇ ಅರುಣ್ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ತನ್ನ ಪ್ರೇಯಸಿಯನ್ನ ತಮಿಳುನಾಡಿಗೆ ಕರೆದುಕೊಂಡು ಹೋಗಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪ ರಂಗರಾಜನ್ ಮೇಲೆ ಬಂದಿದೆ. ಅಷ್ಟೇ ಅಲ್ಲ ಇವರ ಪ್ರೇಯಸಿಯೇ ಕಂಪ್ಲೆಂಟ್ ದಾಖಲಿಸಿದ್ದು ಅರುಣ್ರನ್ನ ತಮಿಳು ನಾಡು ಪೊಲೀಸರು ಬಂಧಿಸಿ ನಂತರ ಜಾಮೀನಿನ ಮೇಲೆ ಹೊರಕಳಿಸಿದ್ದಾರೆ. ಸದ್ಯ ಗಂಡನನ್ನ ಬಿಟ್ಟು ಬಂದ ಸುಜಾತಾ ಪ್ರೀಯಕರನೇ ಎಲ್ಲಾ ಅಂತ ಅಂದುಕೊಂಡು ಅವನ ಜೊತೆ ಬಂದಿದ್ದಳು. ಆದ್ರೆ ಇವತ್ತು ಆತನೇ ಇವಳ ಮೇಲೆ ಹಲ್ಲೆ ಮಾಡಿ ಹೊರಗೆ ಹಾಕಿದ್ದಾನೆ.

ಇದನ್ನೂ ವೀಕ್ಷಿಸಿ:  Murder: ತಾಯಿಯನ್ನ ಕೊಂದು ಠಾಣೆಗೆ ಬಂದು ಶರಣಾದ ಮಗ..! ಊಟ ಹಾಕಲ್ಲ ಎಂದಿದ್ದಕ್ಕೆ ಉಸಿರೇ ನಿಲ್ಲಿಸಿದ ಪಾಪಿ ಪುತ್ರ !