Asianet Suvarna News Asianet Suvarna News

ಮುಸ್ಲಿಂ ಹೇಳಿಕೆ; BSY ಬೆಂಬಲಕ್ಕೆ ನಿಂತ RSS, ಟೀಕಿಸಿದವ್ರು ಈಗೇನಂತಾರೆ?

ಬಿಎಸ್ ಯಡಿಯೂರಪ್ಪ ಮಾತಿಗೆ ಬೆಂಬಲ ಕೊಟ್ಟ  ಆರ್‌ ಎಸ್‌ಎಸ್/ ಒಂದು ಸಮುದಾಯವನ್ನೇ ದೂರುವುದು ತರವಲ್ಲ/ ಬಿಎಸ್‌ವೈ ಟೀಕೆ ಮಾಡಿದವರು ಈಗೇನು ಹೇಳ್ತಾರೆ

ಬೆಂಗಳೂರು(ಏ. 07)  ಸಿಎಂ ಯಡಿಯೂರಪ್ಪ ಅವರ ಬೆಂಬಲಕ್ಕೆ ಆರ್‌ಎಸ್‌ಎಸ್‌ ನಿಂತುಕೊಂಡಿದೆ. ಯಾರೋ ಒಂದಿಷ್ಟು ಜನ  ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂರುವುದು ಸರಿ ಅಲ್ಲ ಎಂದು ಯಡಿಯೂರಪ್ಪ ಹೇಳಿದ ಮಾತಿಗೆ ಬೆಂಬಲ ನೀಡಿದೆ.

ಆರ್‌ ಎಸ್‌ ಎಸ್ ತನ್ನ ಎಲ್ಲ ಶಿಬಿರಗಳನ್ನು ಬಂದ್ ಮಾಡಿದೆ. ಕೊರೋನಾ ವಿರುದ್ಧದ ಹೋರಾಟಕ್ಕೆ ಸರ್ಕಾರದೊಂದಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಯಡಿಯೂರಪ್ಪ ಕೇಳಿಕೊಂಡಿದ್ದರು.