Asianet Suvarna News Asianet Suvarna News

ಕೊರೋನಾ ಮನೆ ಬಾಗಿಲಿಗೆ ಬಂದ್ರೂ ಕಲಬುರಗಿ ಮಂದಿಗೆ ಭಯವೇ ಇಲ್ಲ!

ಭಾರತ್‌ ಲಾಕ್‌ಡೌನ್| ತರಕಾರಿ ಖರೀದಿಗೆ ಮುಗಿಬಿದ್ದ ಜನರು| ಕಲಬುರಗಿ ನಗರದ ಸುಲ್ತಾನಪೂರದ APMC ಯಲ್ಲಿ ನಡೆದ ಘಟನೆ| ಸರ್ಕಾರ ಆದೇಶಗಳನ್ನ ಗಾಳಿಗೆ ತೂರಿದ ಕಲಬುರಗಿ ಜನರು| 

ಕಲಬುರಗಿ(ಏ.04): ಲಾಕ್‌ಡೌನ್‌ ಮಧ್ಯೆಯೂ ಜನರು ತರಕಾರಿ ಖರೀದಿಗೆ ಮುಗಿಬಿದ್ದ ಘಟನೆ ನಗರದ ಸುಲ್ತಾನಪೂರದ ಎಪಿಎಂಸಿಯಲ್ಲಿ ಇಂದು(ಶನಿವಾರ) ನಡೆದಿದೆ. ಕೊರೋನಾ ವೈರಸ್‌ ಅನ್ನು ಹೊಡೆದೋಡಿಸಲು ಜನರು ಗುಂಪು ಗುಂಪಾಗಿ ಸೇರಬೇಡಿ ಎಂದು ಸರ್ಕಾರ ಸಾಕಷ್ಟು ಮನವಿ ಮಾಡಿಕೊಂಡಿದೆ.

ಬೆಳಗಾವಿಯಲ್ಲಿ 3 ಕೊರೋನಾ ಪಾಸಿಟೀವ್ ಪತ್ತೆ; ಜಿಲ್ಲಾಡಳಿತಕ್ಕೆ ಟ್ರಾವೆಲ್ ಹಿಸ್ಟರಿ ಟೆನ್ಷನ್!

ಆದರೆ, ಇಲ್ಲಿನ ಜನರು ಮಾತ್ರ ಸರ್ಕಾರದ ಆದೇಶಗಳನ್ನ ಗಾಳಿಗೆ ತೂರಿ ತಮಗೆ ಹೇಗೆ ಬೇಕೋ ಹಾಗೆ ತರಕಾರಿ ಖರೀದಿಯಲ್ಲಿ ನಿರತರಾಗಿದ್ದಾರೆ. ಇವರಿಗೆ ಕೊರೋನಾ ಬಗ್ಗೆ ಭಯವೇ ಇಲ್ಲವೇನೋ ಎಂಬಂತೆ ಸಾಮಾಜಿಕ ಅಂತರ ಪಾಲಿಸದೆ ಓಡಾಡುತ್ತಿದ್ದಾರೆ. 
 

Video Top Stories