ಕೊರೋನಾ ಆತಂಕ: ಮಾಂಸ ಮಾರಾಟಗಾರರಿಗೆ ಬೆಂಡೆತ್ತಿದ ಕೋಲಾರ ನಗರಸಭೆ ಆಯುಕ್ತ!
ಸಾಮಾಜಿಕ ಅಂತರ ಕಾಯ್ದುಕೊಳ್ಳದ ಮಾಂಸದಂಗಡಿಗಳು| ಮಾಂಸ ಮಾರಾಟಗಾರರನ್ನ ತರಾಟೆಗೆ ತೆಗೆದುಕೊಂಡ ನಗರಸಭೆ ಆಯುಕ್ತ ಶ್ರೀಕಾಂತ್|ಒಂದು ಕೆ.ಜಿ ಮಟನ್ಗೆ 700ಕ್ಕಿಂತ ಹೆಚ್ಚು ರೂಪಾಯಿಗೆ ಮಾರಾಟ|
ಕೋಲಾರ(ಏ.05): ಸಾಮಾಜಿಕ ಅಂತರ ಕಾಯ್ದುಕೊಳ್ಳದ ಮಾಂಸ ಮಾರಾಟಗಾರರಿಗೆ ನಗರಸಭೆ ಆಯುಕ್ತ ಶ್ರೀಕಾಂತ್ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ಇಂದು(ಭಾನುವಾರ) ನಡೆದಿದೆ. ಮಾಂಸ ಮಾರಾಟಗಾರರು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.
ಖಾನಾಪುರದಲ್ಲಿ 11 ತಬ್ಲಿಘಿಗಳು ನಾಪತ್ತೆ: ಆತಂಕದಲ್ಲಿ ಜನತೆ!
ಕೊರೋನಾ ವೈರಸ್ ಹರಡದಂತೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಸರ್ಕಾರದ ಆದೇಶವನ್ನ ಉಲ್ಲಂಘಿಸಿದರೆ ಅಂಗಡಿಗಳ ಪರವಾನಗಿಯನ್ನ ರದ್ದು ಮಾಡುತ್ತೇನೆ ಎಂದು ನಗರಸಭೆ ಆಯುಕ್ತ ಶ್ರೀಕಾಂತ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಒಂದು ಕೆ.ಜಿ ಮಟನ್ಗೆ 700ಕ್ಕಿಂತ ಹೆಚ್ಚು ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.