Asianet Suvarna News Asianet Suvarna News

ನಾನೇ ಬೇರೆ, ನನ್ನ ಸ್ಟೈಲೇ ಬೇರೆ, ಕೊರೋನಾ ಕಾಲದಲ್ಲೂ ಜಮೀರ್ ಅವತಾರ!

ಕೊರೋನಾ ಬಗ್ಗೆ ಎಚ್ಚರಿಕೆ ನೀಡಲು ಹೋಗಿ ಜಮೀರ್ ಎಡವಟ್ಟು/  ಎಲ್ಲರನ್ನೂ ಗುಂಪು ಸೇರಿಸಿಕೊಂಡು ಕೊರೋನಾ ಬಗ್ಗೆ ಜಾಗೃತಿ/ ಜಾಗೃತಿ ಮಾಡೋದಕ್ಕೆ ಹೋಗಿ ಜಮೀರ್ ಎಡವಟ್ಟು/ ಜೆಜೆ ನಗರ ಪೊಲೀಸ್ ಠಾಣೆಯ ಮುಂದೆ ಜನರನ್ನು ಸೇರಿಸಿಕೊಂಡು ಜಾಗೃತಿ 

ಬೆಂಗಳೂರು(ಮಾ. 31) ಕೊರೋನಾ ಲಾಕ್ ಡೌನ್ ನಡುವೆಯೂ ಮನೆ ಮನೆಗೆ ತೆರಳಿ ಎಡವಟ್ಟು ಮಾಡಿಕೊಂಡು ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಸುದ್ದಿಗೆ ಗ್ರಾಸವಾಗಿದ್ದರು. ಈಗ ಚಾಮರಾಜಪೇಟೆ ಶಾಸಕರ ಸರದಿ.

ಕೊರೋನಾ ಹುಚ್ಚಾಟದ ನಡುವೆ ಶುಭಸುದ್ದಿಯೊಂದಿದೆ!

ಎಂಎಲ್ಎ ಜಮೀರ್ ಅಹಮದ್ ಖಾನ್ ಜಾಗೃತಿ ಮೂಡಿಸುವ ಭರದಲ್ಲಿ ಲಾಕ್ ಡೌನ್ ಉಲ್ಲಂಘಿಸಿದ್ದಾರೆ. ಜನರನ್ನು ಗುಂಪುಗೂಡಿಸಿಕೊಂಡಿದ್ದಾರೆ.