Asianet Suvarna News Asianet Suvarna News

ನಮಗೆ ದೈವದ ಶಕ್ತಿಯ ಬಗ್ಗೆ ಗೊತ್ತು: ಚೇತನ್ ಹೇಳಿಕೆಗೆ ಶಾನಿಲ್ ಗುರು ಕಿಡಿ

ಕನ್ನಡದ ನಟ ಚೇತನ್ ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎಂದಿದ್ದು, ಅವರ ಹೇಳಿಕೆಯನ್ನು ಸೀರಿಯಸ್‌ ಆಗಿ ಕಂಸಿಡರ್‌ ಮಾಡಲ್ಲ ಎಂದು ಕಾಂತಾರ ಕಥೆಗಾರ ಶಾನಿಲ್ ಗುರು ಕಿಡಿ ಕಾಡಿದ್ದಾರೆ.

First Published Oct 19, 2022, 5:41 PM IST | Last Updated Oct 19, 2022, 5:41 PM IST

ನಮಗೆ ಭೂತಾರಾಧನೆ ಹಾಗೂ ದೈವಾರಾಧನೆ ಗೊತ್ತು. ನಮ್ಮ ಮಣ್ಣಿನಲ್ಲಿ ಏನು ಇದೆ ನಮಗೆ ಗೊತ್ತು, ಚಿಕ್ಕವರಿರುವಾಗಲೇ ಅದನ್ನು ನಾವು ಪಾಲನೆ ಮಾಡಿಕೊಂಡು ಬಂದವರು. ನಮಗೆ ಅದರ ಶಕ್ತಿಯ ಬಗ್ಗೆ ಗೊತ್ತು, ನಾವು ಅದನ್ನು ನೋಡಿದ್ದೇವೆ ಎಂದಿದ್ದಾರೆ. ಅದು ಯಾರೋ ಒಬ್ಬರು ಬಂದು ಅದರ ಬಗ್ಗೆ ಬೆರಳು ಮಾಡಿ ತೋರಿಸುತ್ತಾರೆ ಎಂದರೆ ನಾವು ಕಂಸಿಡರ್‌ ಮಾಡಲ್ಲ ಎಂದು ಕಿಡಿ ಕಾರಿದ್ದಾರೆ. ಸಿನಿಮಾ ಉತ್ತಂಗಕ್ಕೆ ಹೋಗುವಾಗ ಅದರ ಬಗ್ಗೆ ಮಾತನಾಡುವವರು ಇದ್ದೇ ಇರುತ್ತಾರೆ. ಅವರಲ್ಲಿ ಇವರು ಕೂಡಾ ಒಬ್ಬರು ಎಂದಿದ್ದಾರೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

Video Top Stories