
ಮತ್ತೆ ಒಂದಾಗಲಿದೆ ‘ಸಲಗ’ ಜೋಡಿ; ವಿಜಯ್ ಅಭಿಮಾನಿಗಳಲ್ಲಿ ಕುತೂಹಲ
ಸಲಗ ಚಿತ್ರದ ನಂತರ ದುನಿಯಾ ವಿಜಯ್ ಹಾಗೂ ಶ್ರೀಕಾಂತ್ ಜೋಡಿಯ ಮತ್ತೊಂದು ಸಿನಿಮಾ ಮೊಡಿ ಮಾಡಲಿದೆ. ಆ ಚಿತ್ರವನ್ನು ದೇವನೂರು ಚಂದ್ರು ನಿರ್ದೇಶನ ಮಾಡಲಿದ್ದಾರೆ.
ನಟ ದುನಿಯಾ ವಿಜಯ್ ‘ಭೀಮ’ ಚಿತ್ರದ ಶೂಟಿಂಗ್’ನಲ್ಲಿದ್ದು, ನಿರ್ಮಾಪಕ ಶ್ರೀಕಾಂತ್ ‘ಗ್ರಾಮಾಯಾಣ’, ಮತ್ತು ‘ಯುಐ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದೆಲ್ಲವೂ ಮುಗಿದ ಮೇಲೆ ವಿಜಯ್ ಮತ್ತು ಶ್ರೀಕಾಂತ್ ಮತ್ತೆ ಒಟ್ಟಿಗೆ ಕೆಲಸ ಮಾಡಲಿದ್ದಾರಂತೆ. ‘ಗ್ರಾಮಾಯಾಣ’ ಸಿನಿಮಾದ ಮುಹೂರ್ತದಲ್ಲಿ ಶ್ರೀಕಾಂತ್ ಈ ಸಂಗತಿಯನ್ನು ಅನೌನ್ಸ್ ಮಾಡಿದ್ದಾರೆ. ಸಲಗ ನಂತರ ಮತ್ತೆ ಈ ಜೋಡಿ ಒಂದಾದರೆ ಎಂತಹ ಚಿತ್ರ ಮಾಡಬಹುದು ಎಂದು ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ