Asianet Suvarna News Asianet Suvarna News

ಪವನ್ ಕಲ್ಯಾಣ್ ಮೇಲೆ ಸಿಟ್ಟು ಹೊರ ಹಾಕಿದ ಅಲ್ಲು ಅರ್ಜುನ್ ಮಾವ: ಕಿತ್ತಾಟಕ್ಕೆ ಕಾರಣ ಏನು?

ಹುಟ್ಟುತ್ತ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನೋದು ಕಟು ಸತ್ಯ. ಈಗ ಟಾಲಿವುಡ್​​ನ ಎರಡು ಪ್ರತಿಷ್ಠಿತ ಕುಟುಂಬ ಅಂತ ಕರೆಸಿಕೊಳ್ಳು ಅಲ್ಲು ಅರ್ಜುನ್ ಹಾಗು ಪವನ್ ಕಲ್ಯಾಣ್​ ಮಧ್ಯೆಯೂ ಅಂತಹ ಹಗೆತನ ಬೆಳೆದಿದೆ. 

First Published Aug 28, 2024, 11:03 AM IST | Last Updated Aug 28, 2024, 11:04 AM IST

ಹುಟ್ಟುತ್ತ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನೋದು ಕಟು ಸತ್ಯ. ಈಗ ಟಾಲಿವುಡ್​​ನ ಎರಡು ಪ್ರತಿಷ್ಠಿತ ಕುಟುಂಬ ಅಂತ ಕರೆಸಿಕೊಳ್ಳು ಅಲ್ಲು ಅರ್ಜುನ್ ಹಾಗು ಪವನ್ ಕಲ್ಯಾಣ್​ ಮಧ್ಯೆಯೂ ಅಂತಹ ಹಗೆತನ ಬೆಳೆದಿದೆ. ಹುಟ್ಟುತ್ತ ಅಣ್ಣ ತಮ್ಮಂದಿರಾದ್ರು ಈಗ ಈ ಇಬ್ಬರು ಕುಟುಂಬದವರು ಈಗ​ ದಾಯಾದಿಗಳಾಗಿದ್ದಾರೆ. ಅದಕ್ಕೆ ಕಾರಣ ಏನು..? ಏನಿದು ಅಲ್ಲು-ಪವನ್ ಗದ್ದಲದ ಕತೆ ಇಲ್ಲಿದೆ ನೋಡಿ. ಎಷ್ಟೇ ದುಡ್ಡು, ಅಧಿಕಾರ, ಪ್ರೀತಿಸೋ ಜನರು ಹಿಂದೆ ಮುಂದೆ ಇರಲಿ. ಎಲ್ಲಾರ ಮನೆ ದೋಸೆನೂ ತೂತೆ. ಈಗ ಟಾಲಿವುಡ್​​​​ನ ಮೆಗಾ ಫ್ಯಾಮಿಲಿಗಳಾದ ಸ್ಟೈಲೀಶ್ ಸ್ಟಾರ್​ ಅಲ್ಲು ಅರ್ಜುನ್ ಹಾಗು ಪವರ್ ಸ್ಟಾರ್​ ಪವನ್ ಕಲ್ಯಾಣ್​ ಮಧ್ಯೆಯೂ ಸಿಕ್ಕಾಪಟ್ಟೆ ಕಿರಿಕ್ ಆಗ್ತಿದೆ. 

ಈ ಇಬ್ಬರು ಸ್ಟಾರ್​ ಕುಟುಂಬದ ಮಧ್ಯೆ ವಾರ್​ ಜೋರಾಗಿದೆ. ಕಿತ್ತಾಟಕ್ಕಾಗಿ ಇಬ್ಬರು ಕುಟುಂಬದವರು ಕಾಲ್ಕೆರೆದು ನಿಂತಿದ್ದಾರೆ. ಅಲ್ಲು ಹಾಗು ಪವನ್ ಕಲ್ಯಾಣ್ ಮಧ್ಯೆ ಯಾವುದೂ ಸರಿ ಇಲ್ಲ ಅಂತ ಗೊತ್ತಾಗಿದ್ದು, ಕಳೆದ ಲೋಕಸಭೆ ಎಲೆಕ್ಷನ್​ ಟೈಂನಲ್ಲಿ. ಚುನಾವಣೆಗೆ ಸ್ಪರ್ಧಿಸಿದ್ದ ಪವನ್ ಕಲ್ಯಾಣ್ ವಿರುದ್ಧ ನಿಂತಿದ್ದ ಅಭ್ಯರ್ಥಿ ಪರ ಚುನಾವಣೆ ಪ್ರಚಾರ ಮಾಡಿದ್ರು ಅಲ್ಲು ಅರ್ಜುನ್. ಅಲ್ಲಿಂದಲೇ ಅಲ್ಲು ಅರ್ಜುನ್ ಫ್ಯಾಮಿಲಿ ಹಾಗು  ಪವನ್ ಕಲ್ಯಾಣ್ ಕುಟುಂಬದ ಮಧ್ಯೆ ವಾರ್​​ ಏರ್ಪಟ್ಟಿತ್ತು. ಇದಾದ ಮೇಲೆ ಉಪ ಮುಖ್ಯಮಂತ್ರಿಯಾಗಿ ಬೆಂಗಳೂರಿಗೆ ಬಂದಿದ್ದ ಪವನ್ ಕಲ್ಯಾಣ್​  ಅಣ್ಣಾವ್ರ 'ಗಂಧದಗುಡಿ' ಸಿನಿಮಾ ಹೆಸರೇಳಿ ರಾಜ್​ಕುಮಾರ್ ಅರಣ್ಯ ರಕ್ಷಣೆ ಮಾಡೋ ರೋಲ್ ಮಾಡಿದ್ರು, ಆದ್ರೆ ಇಂದು ಸಂಸ್ಕೃತಿ ಹೇಗೆ ಬದಲಾಗಿದೆ ನೋಡಿ..! 

Video Top Stories