Asianet Suvarna News Asianet Suvarna News

ಸುವರ್ಣ ನ್ಯೂಸ್‌ ಕನ್ನಡಪ್ರಭ ವತಿಯಿಂದ ಉಜ್ವಲ ಉದ್ಯಮಿ ಪ್ರಶಸ್ತಿ ಪ್ರದಾನ

ಏಷ್ಯಾನೆಟ್‌ ಸುವರ್ಣ ನ್ಯೂಸ್‌-ಕನ್ನಡಪ್ರಭ ಕರಾವಳಿಯ ಮಂಗಳೂರಿನಲ್ಲಿ  ಏರ್ಪಡಿಸಿದ ಕರಾವಳಿ ಆವೃತ್ತಿಯ ಉಜ್ವಲ ಉದ್ಯಮಿ ಪ್ರಶಸ್ತಿ ಪ್ರದಾನ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಮಂಗಳೂರಿನಲ್ಲಿ ನಡೆದ ವರ್ಣರಂಜಿತ ಸಮಾರಂಭ ಕರಾವಳಿಯಲ್ಲಿ ನವೋದ್ಯಮ, ಸ್ಟಾರ್ಚ್‌ಅಪ್‌ ಹಾಗೂ ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಗೆ ಹೊಸ ದಿಕ್ಕು ನೀಡುವಲ್ಲಿ ಸಹಕಾರಿಯಾಯಿತು.ಸಮಾರಂಭದಲ್ಲಿ ಉದ್ಘಾಟಕರು, ಪ್ರಶಸ್ತಿ ಪ್ರದಾನ ಮಾಡಿದ ಗಣ್ಯರು ಹಾಗೂ ಪ್ರಧಾನ ಸಂಪಾದಕರ ಆಶಯದ ಮಾತುಗಳನ್ನು ಆಡಿದರು. ಅದಲ್ಲದೆ ಯುವ ಉದ್ಯಮಿಗಳನ್ನು ಸೆಳೆಯಲು ಇಂತಹ ಸಮಾರಂಭ ಆಗಾಗ ನಡೆಯುತ್ತಿರಬೇಕು ಎಂಬುದು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗೇ ಅದ್ದೂರಿಯಾಗಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರ ಕುಟುಂಬವೂ ಪಾಲ್ಗೊಂಡಿದ್ದು, ಸಮಾರಂಭಕ್ಕೆ ಸಾಕ್ಷಿಯಾದ ಗಣ್ಯರು, ಇಂತಹ ಪ್ರಶಸ್ತಿ ಪ್ರದಾನ ಸಮಾರಂಭ ಕರಾವಳಿ ಆವೃತ್ತಿಗೆ ಆಯೋಜಿಸಿದ ಏಷ್ಯಾನೆಟ್‌ ಸುವರ್ಣ ನ್ಯೂಸ್‌-ಕನ್ನಡಪ್ರಭ ಬಳಗಕ್ಕೆ ಮನಃಪೂರ್ವಕ ಅಭಿನಂದನೆ ಸಲ್ಲಿಸಿದರು. 
 

Video Top Stories