ಹತ್ತು ಗಂಟೆಗೆ ಎಲ್ಲಾ ಬಂದ್.. ಬಾರ್ ಮಾಲೀಕರ ನೋವು ಸ್ವಲ್ಪ ಕೇಳಿ
ಕರ್ನಾಟಕದಲ್ಲಿ ಕೊರೋನಾ ಅಬ್ಬರ/ ಶನಿವಾರದಿಂದ ಜಾರಿಯಾಗಲಿದೆ ಕೊರೋನಾ ನಿಷೇಧಾಜ್ಞೆ/ ಬಿಬಿಎಂಪಿ ನೀಡಿರುವ ಎಚ್ಚರಿಕೆ ಪಾಲಿಸಲೇಬೇಕು/ ನಮ್ಮ ಸಮಸ್ಯೆ ಸರ್ಕಾರ ಕೇಳುತ್ತಿಲ್ಲ
ಬೆಂಗಳೂರು(ಏ. 09) ಕೊರೋನಾ ನಿಷೇಧಾಜ್ಞೆಗೂ ಮುನ್ನ ಬೆಂಗಳೂರು ಬೆಚ್ಚಿ ಬಿದ್ದಿದೆ. ಕೇಸ್ ಹೆಚ್ಚಾದರೆ ಬೆಡ್ ವ್ಯವಸ್ಥೆ ಮಾಡುವುದು ಕಷ್ಟ ಎಂದು ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಎಚ್ಚರಿಕೆ ನೀಡಿದ್ದಾರೆ. ಇನ್ನೊಂದು ಕಡೆ ಬಾರ್ ಮತ್ತು ರೆಸ್ಟೊರೆಂಟ್ ಮಾಲೀಕರು ಆತಂಕ ತೋಡಿಕೊಂಡಿದ್ದಾರೆ.
ಬೆಂಗಳೂರಿಗರಿಗೆ ಕೊನೆ ಎಚ್ಚರಿಕೆ ನೀಡಿದ ಕಮಲ್ ಪಂತ್
ಬಾರ್ ಮತ್ತು ಪಬ್ ಗಳಲ್ಲಿ ರಾತ್ರಿ ವ್ಯಾಪಾರ ಚೆನ್ನಾಗಿತ್ತು. ಈಗ ಅದಕ್ಕೆ ಬ್ರೇಕ್ ಬೀಳಲಿದೆ ಎಂದು ಆತಂಕ ತೋಡಿಕೊಂಡಿದ್ದಾರೆ. ಮುಂದಿನ ಹತ್ತು ದಿನ ಗಂಭೀರವಾಗಿದೆ ಎಂಬುದನ್ನು ಜನ ಮರೆಯುವಂತಿಲ್ಲ.