Asianet Suvarna News Asianet Suvarna News

ನಾಪತ್ತೆಯಾಗಿದ್ದ ವರುಣನ ಸಡನ್ ಎಂಟ್ರಿ ಗುಟ್ಟೇನು? ಇನ್ನೆಷ್ಟು ಕಾಲ ಕಾಡಲಿದೆ ರಣರಣ ಮಳೆ!

ಸಿಲಿಕಾನ್ ಸಿಟಿಯಲ್ಲಿ ಸುರಿಯುತ್ತಾ ಇರೋದು ರಣಮಳೆ. ವರುಣನ ರೌದ್ರ ರೂಪಕ್ಕೆ ಮುಳುಗಿದ ಬೆಂಗಳೂರು. ನಲುಗಿ ಹೋದ ರಾಜ್ಯ ರಾಜಧಾನಿ. ರಸ್ತೆಗಳೆಲ್ಲಾ ನದಿಗಳಾಂತಾಗಿವೆ. ಮುಳುಗಿದ ಮನೆಗಳಲ್ಲಿ ಇರೋದಿಕ್ಕೂ ಆಗ್ತಿಲ್ಲಾ. ಹೊರ ಹೋಗೋದಿಕ್ಕೂ ಆಗ್ತಿಲ್ಲ.ಕೆಂಪೇಗೌಡ್ರು ಕಟ್ಟಿದ ನಗರಕ್ಕೀಗ ಜಲ ದಿಗ್ಭಂಧನ. ವರುಣ ಕೆರಳಿದ್ದಾನೆ. ಭೂಮಿ ಕುಸಿದಿದೆ. ಗಾರ್ಡನ್ ಸಿಟಿಗೆ ಜಲ ಗಂಡಾಂತರ ಎದುರಾಗಿದೆ.

First Published Oct 17, 2024, 12:55 PM IST | Last Updated Oct 17, 2024, 12:55 PM IST

ರಾಜ್ಯ ರಾಜಧಾನಿ ಬೆಂಗಳೂರು ಮಾತ್ರವಲ್ಲಾ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸ್ತಿದೆ.  ಅನಾಹುತ ಸೃಷ್ಟಿಸ್ತಿದೆ. ವರುಣನ ವಕ್ರದೃಷ್ಟಿ ಕರ್ನಾಟಕದ ಮೇಲೆ ಬಿದ್ದಿದ್ದು ಕರುನಾಡು ಕಂಗಾಲಾಗಿದೆ.