Asianet Suvarna News Asianet Suvarna News

ಅನ್‌ಲಾಕ್‌ ಆಯ್ತು ಎಂದು ಗ್ರಾಹಕರಿಗೆ ಆಫರ್ ಕೊಟ್ರೆ ಎಚ್ಚರ: ಬಿಬಿಎಂಪಿ ಹೊಸ ರೂಲ್ಸ್!

ಚಿಲ್ಲರೆ ವ್ಯಾಪಾರಿಗಳಿಗೂ ಬಿಬಿಎಂಪಿ ಕಠಿಣ ನಿಯಮಗಳನ್ನು ವಿಧಿಸಿದೆ. ಅನ್‌ಲಾಕ್ ಆಯ್ತು ಎಂದು ಹೊಸ ಆಫರ್ ಕೊಡುವಂತಿಲ್ಲ. ಶಾಪಿಂಗ್ ಫೆಸ್ಟಿವಲ್ ಆಯೋಜಿಸದಂತೆಯೂ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 

ಬೆ<ಗಳೂರು(ಜೂ.15): ಚಿಲ್ಲರೆ ವ್ಯಾಪಾರಿಗಳಿಗೂ ಬಿಬಿಎಂಪಿ ಕಠಿಣ ನಿಯಮಗಳನ್ನು ವಿಧಿಸಿದೆ. ಅನ್‌ಲಾಕ್ ಆಯ್ತು ಎಂದು ಹೊಸ ಆಫರ್ ಕೊಡುವಂತಿಲ್ಲ. ಶಾಪಿಂಗ್ ಫೆಸ್ಟಿವಲ್ ಆಯೋಜಿಸದಂತೆಯೂ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 

ಹೌದು ಗ್ರಾಹಕರನ್ನು ಆಕರ್ಷಿಸುವ ಉದ್ದೇಶದಿಂದ ಬಂಪರ್ ಸೇಲ್, ಆಫರ್ ಮೇಳ ನಡೆಸದಂತೆ ವ್ಯಾಪಾರಿಗಳಿಗೆ ಅಧಿಕಾರಿಗಳು ವಾರ್ನಿಂಗ್ ನೀಡಿದ್ದಾರೆ. ಅಲ್ಲದೇ ಗ್ರಾಹಕರು ಹೆಚ್ಚಾಗಿ ಸೇರುವ ಮಳಿಗೆಯಲ್ಲಿ ಟೋಕನ್ ಪದ್ಧತಿ ಜಾರಿಗೊಳಿಸುವಂತೆ ಹಾಗೂ ಗ್ರಾಹಕರಿಗೆ ಸಿಬ್ಬಂದಿಗಳೇ ವಸ್ತುಗಳನ್ನು ನೀಡುವಂತೆ ಸೂಚಿಸಲಾಗಿದೆ.

ಕೊರೋನಾ ಈಗಷ್ಟೇ ಇಳಿಕೆಯಾಗಿದೆ. ಆದರೆ ಅಪಾಯ ಸಂಪೂರ್ಣ ನಿವಾರಣೆಯಾಗಿಲ್ಲ. ಹೀಗಿರುವಾಗ ಇಂತಹ ಆಫರ್ ನೀಡಿ, ಜನ ಸೇರಿದರೆ ಮತ್ತೆ ಸೋಂಕು ಹೆಚ್ಚುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಎಚ್ಚರ ವಹಿಸುವಂತೆ ಇಂತಹುದ್ದೊಂದು ಆದೇಶ ಹೊರಡಿಸಲಾಗಿದೆ. 

Video Top Stories