ಅಕ್ರಮ ವಲಸಿಗರಿಗಾಗಿ ಬೆಂಗಳೂರಿನಲ್ಲಿ ಗಡಿಪಾರು ಕೇಂದ್ರ
ಬೆಂಗಳೂರಿನಲ್ಲಿ ನುಸುಳಿರುವ ಅಕ್ರಮ ವಲಸಿಗರಿಗಾಗಿ ಬೆಂಗಳೂರು ನೆಲಮಂಗಲದಲ್ಲಿ ಸೆರೆ-ಕೇಂದ್ರವನ್ನು ನಿರ್ಮಿಸಲಾಗುತ್ತಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಅಕ್ರಮ ವಿದೇಶಿಗರನ್ನು ಪತ್ತೆ ಹಚ್ಚಿ ಅವರನ್ನು ಕೂಡಿಡಲು ಬೆಂಗಳೂರು ಹೊರವಲಯದ ನೆಲಮಂಗಲದ ಸೊಂಡೆಕೊಪ್ಪ ಸಮೀಪ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಬೆಂಗಳೂರು (ಅ.18): ಬೆಂಗಳೂರಿನಲ್ಲಿ ನುಸುಳಿರುವ ಅಕ್ರಮ ವಲಸಿಗರಿಗಾಗಿ ಬೆಂಗಳೂರು ನೆಲಮಂಗಲದಲ್ಲಿ ಸೆರೆ-ಕೇಂದ್ರವನ್ನು ನಿರ್ಮಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ನೆಲೆಸಿರುವ ಅಕ್ರಮ ವಿದೇಶಿಗರನ್ನು ಪತ್ತೆ ಹಚ್ಚಿ ಅವರನ್ನು ಕೂಡಿಡಲು ಬೆಂಗಳೂರು ಹೊರವಲಯದ ನೆಲಮಂಗಲದ ಸೊಂಡೆಕೊಪ್ಪ ಸಮೀಪ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಅಕ್ರಮ ವಲಸಿಗರಿಗಾಗಿ ಅಸ್ಸಾಂ ಮಾದರಿಯಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (NRC) ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಈ ಹಿಂದೆ ಹೇಳಿಕೆ ನೀಡಿದ್ದರು.