Asianet Suvarna News Asianet Suvarna News

ಮತ್ತೆ ಅಬ್ಬರಿಸಿದ ವರುಣ: ಯಲ್ಲಮ್ಮ ದೇವಸ್ಥಾನ ಜಲಾವೃತ

ಬೆಳಗಾವಿ[ನ.7]: ಬುಧವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೊಕಟನೂರು ಯಲ್ಲಮ್ಮ ದೇವಸ್ಥಾನ ಜಲಾವೃತವಾಗಿದೆ. ಪಕ್ಕದ ಕೆರೆ ಕೋಡಿ ಬಿದ್ದು ಸುತ್ತಮುತ್ತಲ ಹೊಲಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದರಿಂದ ಮೇವಿನ ಬೆಳೆ ಸಂಪೂರ್ಣ ನಾಶವಾಗಿದೆ. ಇನ್ನು ದೇವಸ್ಥಾನದ ರಸ್ತೆಯಲ್ಲಿ ರಭಸವಾಗಿ ನೀರು ಹರಿಯುತ್ತಿದೆ. ರಸ್ತೆ ಅಕ್ಷರಶಹಃ ಕಾಲುವೆಯಂತಾಗಿದೆ. ಇತ್ತೀಚೆಗಷ್ಟೇ ಭೀಕರ ಪ್ರವಾಹದಿಂದ ನಲುಗಿದ್ದ ಜನತೆಗೆ ಇದೀಗ ಮತ್ತೆ ಮಳೆಯಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾತ್ರಿಯಿಡಿ ಸುರಿದ ಮಳೆಯಿಂದ ಯಾವೆಲ್ಲ ಸಮಸ್ಯೆಗಳು ಉದ್ಭವಾಗಿವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ. 

ಬೆಳಗಾವಿ[ನ.7]: ಬುಧವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೊಕಟನೂರು ಯಲ್ಲಮ್ಮ ದೇವಸ್ಥಾನ ಜಲಾವೃತವಾಗಿದೆ. ಪಕ್ಕದ ಕೆರೆ ಕೋಡಿ ಬಿದ್ದು ಸುತ್ತಮುತ್ತಲ ಹೊಲಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದರಿಂದ ಮೇವಿನ ಬೆಳೆ ಸಂಪೂರ್ಣ ನಾಶವಾಗಿದೆ. ಇನ್ನು ದೇವಸ್ಥಾನದ ರಸ್ತೆಯಲ್ಲಿ ರಭಸವಾಗಿ ನೀರು ಹರಿಯುತ್ತಿದೆ. ರಸ್ತೆ ಅಕ್ಷರಶಹಃ ಕಾಲುವೆಯಂತಾಗಿದೆ. ಇತ್ತೀಚೆಗಷ್ಟೇ ಭೀಕರ ಪ್ರವಾಹದಿಂದ ನಲುಗಿದ್ದ ಜನತೆಗೆ ಇದೀಗ ಮತ್ತೆ ಮಳೆಯಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾತ್ರಿಯಿಡಿ ಸುರಿದ ಮಳೆಯಿಂದ ಯಾವೆಲ್ಲ ಸಮಸ್ಯೆಗಳು ಉದ್ಭವಾಗಿವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.