ಜಾರಕಿಹೊಳಿಗೆ ಟಿಕೆಟ್ ಬೇಡ: ಕಾರ್ಯಕರ್ತರ ಒತ್ತಾಯ!
ಉಪಚುನಾವಣೆ ಸಮೀಪಿಸುತ್ತಿದ್ದಂತೆ ಟಿಕೆಟ್ ರಾಜಕೀಯ ಜೋರಾಗ್ತಿದೆ. ಟಿಕೆಟ್ ಯಾರಿಗೆ ಕೊಡ್ಬೇಕು, ಕೊಡ್ಬಾರದು ಎಂಬ ಬಗ್ಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತಲೆಕೆಡಿಸಿಕೊಂಡಿದ್ದಾರೆ. ಸರ್ಕಾರ ಪತನಕ್ಕೆ ಕಾರಣವಾದ ಬೆಳಗಾವಿ ರಾಜಕೀಯದಲ್ಲೂ ಟಿಕೆಟ್ ವಿಚಾರವಾಗಿ ಮುಸುಕಿನ ಗುದ್ದಾಟ ಶುರುವಾಗಿದೆ.
ಬೆಂಗಳೂರು (ಅ.30): ಉಪಚುನಾವಣೆ ಸಮೀಪಿಸುತ್ತಿದ್ದಂತೆ ಟಿಕೆಟ್ ರಾಜಕೀಯ ಜೋರಾಗ್ತಿದೆ. ಟಿಕೆಟ್ ಯಾರಿಗೆ ಕೊಡ್ಬೇಕು, ಕೊಡ್ಬಾರದು ಎಂಬ ಬಗ್ಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತಲೆಕೆಡಿಸಿಕೊಂಡಿದ್ದಾರೆ.
ಸರ್ಕಾರ ಪತನಕ್ಕೆ ಕಾರಣವಾದ ಬೆಳಗಾವಿ ರಾಜಕೀಯದಲ್ಲೂ ಟಿಕೆಟ್ ವಿಚಾರವಾಗಿ ಮುಸುಕಿನ ಗುದ್ದಾಟ ಶುರುವಾಗಿದೆ. ಗೋಕಾಕ್ನಲ್ಲಿ ಜಾರಕಿಹೊಳಿ ಸಹೋದರರಿಗೆ ಟಿಕೆಟ್ ಕೊಡಬಾರದು ಎಂದು ನಾಯಕರಿಗೆ ಬೆಂಬಲಿಗರು ಒತ್ತಾಯಿಸಲು ಶುರುಮಾಡಿದ್ದಾರೆ.
17 ಶಾಸಕರ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರಗಳ ಪೈಕಿ 15 ಕಡೆ ಡಿ.05ಕ್ಕೆ ಮತದಾನ ನಡೆಯಲಿವೆ. ಡಿ.09ಕ್ಕೆ ಫಲಿತಾಂಶ ಪ್ರಕಟವಾಗಲಿದೆ.